ಭಾನುವಾರ, ಜನವರಿ 12, 2025
ವಿಜಯಲಕ್ಷ್ಮಿ ಗೌತಮಕರ್
ಉದಯೋನ್ಮುಖ ಬರಹಗಾರ್ತಿಯಾದ ವಿಜಯಲಕ್ಷ್ಮಿ ಗೌತಮಕರ್. ಇವರು ಬೀದರ ತಾಲೂಕಿನ ಅಲಿಯಂಬರ ಗ್ರಾಮದ ಶಿವರಾಜ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೧೨-೧೦-೧೯೯೦ ರಲ್ಲಿ ಜನಿಸಿದ್ದಾರೆ. ಡಿ.ಎಡ್ ಶಿಕ್ಷಕರ ತರಬೇತಿ ಕೊರ್ಸು ಮುಗಿಸಿ ಬಿ.ಎ.ಪದವಿಯೊಂದಿಗೆ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿ `ಮನದಾಳದ ಮಿಂಚು' ಎಂಬ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬೀದರ ಜಿಲ್ಲೆಯಾದ್ಯಂತ ಹೊಬಳಿ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿ ಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಬರಹಗಳು ರಾಜ್ಯಮಟ್ಟದ ಮತ್ತು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಸಂಘ ಸಂಸ್ಥೆಯವರಿAದ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರ ನಗರದ ನಾಗವಂಶ ಕೋ ಆಪರೇಟಿವ್ ಬ್ಯಾಂಕನ ಅಧ್ಯಕ್ಷರಾಗಿ ಬರವಣಿಗೆ ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ