ಶನಿವಾರ, ಜನವರಿ 11, 2025
ಪೀರಪ್ಪ ಸಜ್ಜನ.
ಯುವ ಸಾಹಿತಿ ಪೀರಪ್ಪ ಸಜ್ಜನ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೋರಂಪಳ್ಳಿ ಗ್ರಾಮದ ಭೂಷಣ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩೧-೭-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ವಿದ್ಯಾರ್ಥಿಯಾಗಿರುವಾಗಲೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ೨೦೧೪ರಲ್ಲಿ `ಬೀದರ ಜಿಲ್ಲಾ ದಲಿತ ಸಾಹಿತ್ಯ' ೨೦೧೮ರಲ್ಲಿ `ಸಮಾಜ ಮುಖಿ ಮಂಥನ'. ೨೦೧೯ರಲ್ಲಿ `ಮಹಿಳಾ ಬೆಳಕು ಡಾ.ಬಿ.ಆರ್.ಅಂಬೇಡ್ಕರ್' ಎಂಬ ಲೇಖನ ಕೃತಿಗಳು, ೨೦೧೯ `ಸಮರಸ ಜೀವಿ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದ್ದಾರೆ. ಇವರ `ಸಮಾಜ ಮುಖಿ ಮಂಥನ' ಮತ್ತು `ಬೀದರ ಜಿಲ್ಲೆಯ ದಲಿತ ಸಾಹಿತ್ಯ' ಈ ಎರಡು ಕೃತಿಗಳು ಪುಸ್ತಕ ಅಭಿವೃದ್ಧಿ ಪ್ರಾಧಿಕಾರದಿಂದ ಚೊಚ್ಚಿಲ ಕೃತಿ ಹಾಗೂ ದಲಿತ ಯುವ ಲೇಖಕರಿಗೆ ನೀಡುವ ಯೋಜನೆಯ ಅನುದಾನ ಪಡೆದು ಮುದ್ರಣಗೊಂಡಿವೆ. ಇವರು ಬರೆದ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಹಲವಾರು ವಿಷಯಗಳ ಮೇಲೆ ಪ್ರಬಂಧ ಮಂಡಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ