ಶನಿವಾರ, ಜನವರಿ 11, 2025
ಶಕೀಲ್ ಐ.ಎಸ್.
ಸಾಹಿತಿ ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಖೇಣಿ ರಂಜೋಳ ಗ್ರಾಮದ ಎಕ್ಬಾಲ್ ಸಾಬ್ ಸಿದ್ದೇಸೂರವಾಲೆ, ಮತ್ತು ಶಹನಾಜ್ ಬೇಗಂ ಎಂಬ ದಂಪತಿಗಳಿಗೆ ದಿನಾಂಕ ೩-೬-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಪದವಿವರೆಗೆ ಅಧ್ಯಯನ ಮಾಡಿದ ಇವರು ೨೦೦೫ರಲ್ಲಿ ಪೋಲಿಸ್ ಪೆದೆಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಅಭಿವೃದ್ಧಿ ಪಥ', 'ಕರ್ನಾಟಕ ಇತಿಹಾಸ, `ಹುಮನಾಬಾದ ತಾಲೂಕು ಇತಿಹಾಸ' ಎಂಬ ಲೇಖನ ಕೃತಿಗಳು, `ಮೂರು ನಾಟಕಗಳು' ಎಂಬ ನಾಟಕ ಕೃತಿಯು ರಚಿಸಿ ಪ್ರಕಟಿಸಿದ್ದಾರೆ. `ಭ್ರಷ್ಟಾಚಾರ ದೇಹಕ್ಕೂ ಮಾರಕ' ಎಂಬ ನಾಟಕ ಕಿರುಚಿತ್ರವಾಗಿ ತಯಾರಿಸಿ ಪುಣೆಯಲ್ಲಿ ನಡೆಯುವ ಕಿರುಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. `ಬೀದರ ಜಿಲ್ಲೆಯ ಸೂಫಿಗಳು' ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. `ನಳದಮಯಂತಿ' ಇದು ಪೌರಾಣಿಕ ಕತೆಯಾದರೆ . `ಗರ್ಭಕೋಶದಲ್ಲಿ ಮಹಾಯುದ್ಧ' (ಕಥಾಸಂಕಲನ) `ಧರಿನಾಡಿನ ಗಂಡುಗಲಿ '(ವ್ಯಕ್ತಿಚಿತ್ರಣ) ಇವು ಅವರ ಅಪ್ರಕಟಿತ ಕೃತಿಗಳಾಗಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ವಿವಿಧ ಕನ್ನಡಪರ ಸಂಘ ಸಂಸ್ಥೆಯವರು `ಕನ್ನಡ ರತ್ನ' `ಕಲ್ಯಾಣ ಚನ್ನಶ್ರೀ, ಕನ್ನಡ ಕಠಿರವ, ಸಾಹಿತ್ಯ ಚೂಡಾಮಣಿ, ಧರಿರತ್ನ, ಯುವಶಕ್ತಿ ಕಲಾ ಶ್ರೀ, ಸಿದ್ದಾರ್ಥ’ ಎಂಬ ಪ್ರಶಸ್ತಿಗಳು ಹಾಗೂ ಪೋಲಿಸ್ ಇಲಾಖೆಯಲ್ಲಿ ಇವರ ಕಾರ್ಯ ಸಾಧನೆಗೆ ಮೆಚ್ಚಿ ಸಾಕಷ್ಟು ಸಲ ಬಹುಮಾನಗಳು ನೀಡಿ ಗೌರವಿಸಿದ್ದಾರೆ. ಇವರು ಸೂಫಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ, ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಯಾಗಿ, ಬೀದರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ