ಪುಟಗಳು

ಶನಿವಾರ, ಜನವರಿ 11, 2025

ಡಾ.ರತ್ನಾಕರ್ ಡಿ.ಹೊಸಮನಿ

ಯುವ ಸಾಹಿತಿ ಡಾ.ರತ್ನಾಕರ್ ಡಿ.ಹೊಸಮನಿಯವರು. ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಉಡಮನಳ್ಳಿ ಗ್ರಾಮದ ದೇವಿಂದ್ರ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೨-೭-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ (ಇತಿಹಾಸ). ಬಿ.ಎಡ್. ಪಿ.ಎಚ್.ಡಿ. ಪಿ.ಡಿ.ಎಫ್.ಪದವಿಧರರಾಗಿದ್ದು, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು' (ಐತಿಹಾಸಿಕ) `ದೇವರಾಜ ಅರಸು' (ಚರಿತ್ರೆ) `ಕರ್ನಾಟಕ ಅರಚಿಟೆಚರ್ ಬೀದರ' ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರಿಗೆ ಇಂಡಿಯನ್ ಕೌನ್ಸಿಲ್ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ ನವದೆಹಲಿಯಿಂದ ೨೦೧೮ರಲ್ಲಿ ಸಂಶೋಧನಾ ಶಿಷ್ಯ ವೇತನ ಪ್ರಶಸ್ತಿ, ಮತ್ತು ಯುಜಿಸಿ ನವದೆಹಲಿಯಿಂದ ಉನ್ನತ ಸಂಶೋಧಕ ಪ್ರಶಸ್ತಿ, ಹಾಗೂ ೨೦೧೯ರಲ್ಲಿ ಡಾ.ಅಂಬೇಡ್ಕರ್ ರಾಷ್ಟ್ರೀಯ ಶಿಷ್ಯ ವೇತನ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ಪ್ರಜಾ ರಾಜ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ