ಪುಟಗಳು

ಶನಿವಾರ, ಜನವರಿ 11, 2025

ವೀರಶೆಟ್ಟಿ ಎಂ.ಪಾಟೀಲ್

‘ವೀ.ಪಾಟೀಲ್’ ಎಂದೇ ಖ್ಯಾತರಾದ ವೀರಶೆಟ್ಟಿ ಎಂ.ಪಾಟೀಲ ರವರು ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ಮಾರುತಿರಾವ ಹಾಗೂ ಕಮಳಾಬಾಯಿ ದಂಪತಿಗಳಿಗೆ ದಿನಾಂಕ ೫-೭-೧೯೭೨ರಂದು ಜನಿಸಿದ್ದಾರೆ. ಎಂ.ಎಫ್.ಎ. ಪದವಿಧರರಾದ ಇವರು ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ, ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಫೋಟೊಗ್ರಾಫರಾಗಿ ಗುರುತಿಸಲ್ಪಡುತ್ತಾರೆ ಅನ್ನೋದಕ್ಕೆ ಅವರು ರಚಿಸಿದ ಚಿತ್ರಗಳಿಗೆ ಚಿತ್ರಕಲೆ ಹಾಗೂ ಫೋಟೊಗ್ರಾಫಿಯಲ್ಲಿ ಸಂದ ರಾಜ್ಯ, ರಾಷ್ಟç, ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿಗಳೇ ಸಾಕ್ಷಿಯಾಗಿವೆ. ಥರ್ಮಾಕೋಲ್‌ಡಿಸೈನ್, ನೆನಪಿನ ಕಾಣಿಕೆ ವಿಭಿನ್ನ ರೀತಿಯಲ್ಲಿ ವಿನೂತನ ಸೊಬಗನ್ನು ಚಿತ್ರಿಸುತ್ತ ಈ `ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ರಚಿಸಿದ್ದಾರೆ. ಮತ್ತು ‘ಓ ನನ್ನ ಕನ್ನಡ’, ‘ಮೂರನೇ ಮಹಾಯುದ್ಧ’ (ಕವನ ಸಂಕಲನ) ‘ನಾರಾಯಣಪೂರ ವಾಸ್ತು ಶಿಲ್ಪ ಕಲೆಗಳ ವೈಭವ', ‘ವ್ಯಸನಮುಕ್ತ ಸಮಾಜಕ್ಕಾಗಿ ಅಭಿನವ ಘನಲಿಂಗ ಜೋಳಿಗೆ' (ಲೇಖನ) ‘ಸಾತ್ವಿಕ', ‘ವೈರಾಣು ಹೈರಾಣು ವಿಶ್ವ ಮಹಾಯುದ್ಧ' (ಹನಿಗವನ ಸಂಕಲನ) ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಕಲೆ, ಸಾಹಿತ್ಯ ಮತ್ತು ಛಾಯಾಗ್ರಾಹಕರಾಗಿ ಬಹುಮುಖ ಪ್ರತಿಭೆ ವ್ಯಕ್ತಿಯಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ೨೦ಕ್ಕಿಂತ ಹೆಚ್ಚು ರಾಜ್ಯ ಹಾಗೂ ರಾಷ್ಟç, ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೧೮ರಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ ಶಿವಾಚಾರ್ಯ ತ್ರೀಪೂರಾಂತ ವತಿಯಿಂದ ‘ಅಭಿನವ ಘನಲಿಂಗ ಶ್ರೀ ಪ್ರಶಸ್ತಿ, ರೋಣ-ಗಜೇಂದ್ರಗಡದ ಕನ್ನಡ ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ರಾಜ್ಯ ಮಟ್ಟದ ಪುಸ್ತಕ ಸ್ಪರ್ಧೆಯಲ್ಲಿ ಇವರ ‘ಸಾತ್ವಿಕ' ಹನಿಗವನ ಸಂಕಲನಕ್ಕೆ ‘ಸಾಹಿತ್ಯ ಚಿಗುರು ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ. ಇವರ ಕತೆ, ಕವನ, ಚುಟುಕು ಲೇಖನ ಬರಹಗಳು ಪ್ರಜಾವಾಣಿ, ಸಂಯುಕ ್ತಕರ್ನಾಟಕ, ಕರ್ಮವೀರ, ತುಷಾರ, ಛಾಯಾ ಚಂದನ, ಮೊದಲಾದ ಪತ್ರಿಕೆ ಹಾಗೂ ಆಕಾಶವಾಣಿ, ಮಂಗಳೂರು ಕುಡ್ಲ ವಾಹಿನಿಯಿಂದ ಪ್ರಕಟ, ಪ್ರಸಾರವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ