ಪುಟಗಳು

ಶನಿವಾರ, ಜನವರಿ 11, 2025

ಡಾ.ರೂತಾ ಪ್ರಭುರಾವ

ಕವಯತ್ರಿ ಡಾ.ರೂತಾ ಪ್ರಭುರಾವ ರವರು ಬೀದರ ಜಿಲ್ಲೆ ಹಮನಾಬಾದಿನ ಶಿವರಾಮ ಮತ್ತು ತುಳಸಮ್ಮಾ ದಂಪತಿಗಳಿಗೆ ದಿನಾಂಕ ೯-೧೨-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್. ಪಿಎಚ್.ಡಿ. ವಚನ ಡಿಪ್ಲೋಮಾ. ನೆಟ್. ಪದವಿಧರರಾದ ಇವರು ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೦೭ರಲ್ಲಿ `ವಸಂತ ಕುಷ್ಟಗಿಯವರ ಬದುಕು ಬರಹ’ ಎಂಬ ಕೃತಿ ಪ್ರಕಟಿಸಿದ್ದಾರೆ. ಇವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ `ಕನಕ ಸಿರಿ' ಮತ್ತು `ಡಾ.ಬಿ.ಆರ್.ಅಂಬೇಡ್ಕರ' ಪ್ರಶಸ್ತಿಗಳು ಲಭಿಸಿವೆ. ಇವರು ಹುಮನಾಬಾದ ತಾಲೂಕಿನ ವಿಶ್ವ ವಚನ ಫೌಂಡೇಷನ್ ಮತ್ತು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ