ಶನಿವಾರ, ಜನವರಿ 11, 2025
ಡಾ.ಚಿದಾನಂದ ಚಿಕ್ಕಮಠ
ಉದಯೋನ್ಮುಖ ಬರಹಗಾರ ಡಾ.ಚಿದಾನಂದ ಚಿಕ್ಕಮಠ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಗಂಗಾಧರಯ್ಯ ಚಿಕ್ಕಮಠ ಮತ್ತು ಶ್ರೀಮತಿ ಸಂಗಮ್ಮ ದಂಪತಿಗಳಿಗೆ ದಿನಾಂಕ ೧೧-೧೦-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ೨೦೧೮ರಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ. `ಕಿನ್ನರಿ ಬ್ರಹ್ಮಯ್ಯ-ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ವಚನ ಸಾಹಿತ್ಯ, ವೀರಶೈವ ಸಾಹಿತ್ಯ, ನಡುಗನ್ನಡ, ಹಸ್ತಪ್ರತಿ,ಗ್ರಂಥ ಸಂಪಾದನೆ ಕಾರ್ಯದಲ್ಲಿ ಆಸಕ್ತರಾಗಿ ೨೦೧೮ರಲ್ಲಿ `ಕಿನ್ನರಿ ಬ್ರಹ್ಮಯ್ಯ ಕೆಲವು ಒಳನೋಟಗಳು’ ಮತ್ತು ೨೦೧೯ರಲ್ಲಿ `ಕಿನ್ನರಿ ಬ್ರಹ್ಮಯ್ಯ’ ಎಂಬ ಈ ಕೃತಿಗಳು ೧೨ನೇ ಶತಮಾನದ ಶರಣ ಕಿನ್ನರಿ ಬೊಮ್ಮಯ್ಯನ ಕುರಿತು ಬರೆದಿದ್ದಾರೆ. ಮತ್ತು ೨೦೧೯ರಲ್ಲಿ `ನಿರಂಜನ ಪ್ರಭೆ' ಮತ್ತು `ಭವ್ಯ ಮಾನವ ಸಂಗ್ರಹ' ಮತ್ತಿತರ ಕೃತಿಗಳು ಸಂಪಾದಿಸಿದ್ದಾರೆ. ಇವರ `ಭವ್ಯ ಮಾನವ' ಕೃತಿಯು ಕಲಬುರಗಿ ಶ್ರೀ ಶರಣ ಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಮುದ್ರಣದಗೊಂಡಿದೆ. ಇವರು ವಿಶ್ವವಿದ್ಯಾಲಯ ಅಭ್ಯಾಸ ಮತ್ತು ಪರೀಕ್ಷಾ ಮಂಡಳಿಗಳ ಸದಸ್ಯರಾಗಿ, ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯು ಕಾರ್ಯನಿರ್ವಹಿಸುತ್ತಿದ್ದು, ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೯ರಲ್ಲಿ ಹಳ್ಳಿಖೇಡ (ಕೆ) ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ