ಪುಟಗಳು

ಶುಕ್ರವಾರ, ಜನವರಿ 10, 2025

ಗುರುನಾಥ ಅಕ್ಕಣ್ಣ

ಕತೆಗಾರ ಗುರುನಾಥ ಅಕ್ಕಣ್ಣನವರು. ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಕಾಶಪ್ಪಾ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೮-೧೨-೧೯೬೩ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರ ಪದವಿಧರರಾದ ಇವರು ೧೯೮೩ರಲ್ಲಿ ಅಂಚೆ ಇಲಾಖೆಯಲ್ಲಿ ಸೇವೆಗೆ ಸೇರಿ ಸದ್ಯ ಬೀದರದ ಪ್ರಧಾನ ಅಂಚೆ ಕಛೇರಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥಾ ರಚನೆಯ ಕಲೆ ಕರಗತ ಮಾಡಿಕೊಂಡ ಇವರು ದ್ಯಾವನೂರು ಮಹಾದೇವರಂತೆ ಬರೆದದ್ದು ಕಡಿಮೆಯಾದರು ಗಟ್ಟಿ ಸಾಹಿತ್ಯವನ್ನೆ ರಚನೆ ಮಾಡಿ ೧೯೯೦ರಲ್ಲಿ `ಯಾರನ್ನು ಪ್ರೀತಿಸಬೇಡ' ೧೯೯೬ರಲ್ಲಿ `ಇದು ಎಂಥ ಲೋಕವಯ್ಯಾ’ ೨೦೦೯ರಲ್ಲಿ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ' ಎಂಬ ಕಥಾಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ‘ಬಿಸಿಲು ಬೆಳದಿಂಗಳು' ಎಂಬ ಕತೆಯು ಮಲೆಯಾಳಂ ಭಾಷೆಗೆ ಕೆ.ಟಿ.ರವಿ ಎನ್ನುವರು ಅನುವಾದಿಸಿದ್ದು ಇವರ ನಾಲ್ಕು ಕತೆಗಳು ಮರಾಠಿಗೆ, ಒಂದು ಕತೆ ಹಿಂದಿಗೆ ಭಾಷಾಂತರಗೊAಡಿವೆ. ಇವರ `ಆಯ್ಕೆ' ಎಂಬ ಕತೆ ಬೆಂಗಳೂರು ದೂರದರ್ಶನದಿಂದ ಡಾ.ಬಸವರಾಜ ನಂದಿಧ್ವಜ ಅವರ ನಿರ್ದೇಶನದಲ್ಲಿ ಧಾರವಾಹಿಯಾಗಿ ಪ್ರಸಾರವಾಗಿದೆ. ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದ ಅಮರೇಶ್ವರ ನುಗಡೋಣಿಯವರು ಸಂಪಾದಿಸಿದ ಹೈದರಾಬಾದ್ ಕರ್ನಾಟಕ ಲೇಖಕರ ಪ್ರಾತಿನಿಧಿಕ ಸಂಕಲನ `ಬಿಸಿಲ ಹನಿಗಳು' ಎಂಬ ಕಥಾ ಸಂಕಲನದಲ್ಲಿ ಇವರ `ಈ ಸಂಘರ್ಷಕ ಉಂಟೆನಯ್ಯಾ ಕೊನೆ’ ಎಂಬ ಕತೆಯು ಪ್ರಕಟವಾಗಿದೆ. ೧೯೯೦ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಇವರ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ' ಕತೆಗೆ ಬಹುಮಾನ ಮತ್ತು ೨೦೦೧ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ದತ್ತಿ ಕಥಾಸ್ಪರ್ಧೆಯಲ್ಲಿ ಇವರ `ನೀ ಮಾಯೆಯೊಳಗೊ ! ನಿನ್ನೊಳು ಮಾಯೆಯೋ ! ' ಮತ್ತು ೨೦೦೪ ರಲ್ಲಿ 'ಭವದ ಬೀಜ' ಎಂಬ ಕತೆಗಳಿಗೆ ಎರಡು ಸಲ ಬಹುಮಾನವು ಪಡೆದಿದ್ದಾರೆ. ಇವರು ೧೯೯೧ರಲ್ಲಿ `ಬೀದರ ಜಿಲ್ಲೆಯ ಬರಹಗಾರರು ಮತ್ತು ಕಲಾವಿದರ ಸಂಘವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ, ೨೦೦೪ರಿಂದ ೨೦೦೭ರವರೆಗೆ ಬೀದರ ತಾಲೂಕಿನ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕತೆಗಳು ತರಂಗ ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿ, ದೂರದರ್ಶನದಲ್ಲಿಯು ಪ್ರಕಟ, ಪ್ರಸಾರವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ