ಪುಟಗಳು

ಶುಕ್ರವಾರ, ಜನವರಿ 10, 2025

ಪೂಜ್ಯ. ಶ್ರೀ. ಡಾ.ರಾಜಶೇಖರ ಶಿವಾಚಾರ್ಯರು

ಸಾಹಿತಿಗಳಾದ ಪೂಜ್ಯ.ಶ್ರೀ.ಡಾ.ರಾಜಶೇಖರ ಶಿವಾಚಾರ್ಯರು. ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶ್ರೀ.ವೇದಮೂರ್ತಿ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಶ್ರೀಮತಿ ವೀರಮ್ಮ ದಂಪತಿಗಳಿಗೆ ದಿನಾಂಕ ೪-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆಮಳಖೇಡÀ ಹೀರೆಮಠ ಸಂಸ್ಥಾನದ ಪೀಠಾಧೀಪತಿಗಳಾಗಿದ್ದಾರೆ. `ವೀರಶೈವ ಪಂಚಪೀಠಗಳು ಒಂದು ಅಧ್ಯಯನ' ಎಂಬುದು ಅವರ ಪಿ.ಎಚ್.ಡಿ ಮಹಾಪ್ರಬಂಧವಾಗಿದೆ. ೧೯೯೪ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ವಿದ್ವತ್ ಸಂಗೀತ, ವಿದ್ವತ್ ತಬಲಾ, ಸಂಗೀತ ಮಾರ್ತಾಂಡ, ಎಂಬ ಪದವಿಗಳು ಪಡೆದು, ಬೆಂಗಳೂರಿನ ಕಸಾಪದಿಂದ `ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾ’ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಉಭಯ ಕ್ಷೇತ್ರಗಳಲ್ಲಿ ಆಸಕ್ತರಾದ ಶ್ರೀಗಳು ೧೯೯೮ರಲ್ಲಿ `ಹೊಗೆ ಚಿತ್ತಾರ' ಎಂಬ ಕವನಸಂಕಲನ, ೧೯೯೯ರಲ್ಲಿ `ಶಾಸನಗಳಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರು’ ೨೦೦೩ರಲ್ಲಿ `ಕೊಲ್ಲಿಪಾಕ:ಇತಿಹಾಸ ಮತ್ತು ಉಪಾಸನೆ’ ೨೦೦೪ರಲ್ಲಿ `ರಂಭಾಪುರಿ ಬೆಳಗು' ೨೦೦೫ರಲ್ಲಿ `ಶಾಸನಗಳಲ್ಲಿ ಪಂಚಪೀಠಗಳು' ಎಂಬ ಕೃತಿಗಳು ಮತ್ತು `ಮಲಯಾಚಲ ದೀಪ್ತಿ’, `ಮುನೀಂದ್ರ ವಿಜಯ’, `ಕಲ್ಯಾಣ ಕಲ್ಪ’, `ವೀರ ಪ್ರಭೆ’, `ಹೊಂಗಿರಣ’. ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೦೩ರಲ್ಲಿ ಬಸವಕಲ್ಯಾಣ ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಗಳಿಗೆ ೨೦೧೨ ರಲ್ಲಿ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದಲ್ಲಿ ನಡೆದ ೬ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ