ಶುಕ್ರವಾರ, ಜನವರಿ 10, 2025
ಪ್ರಕಾಶ ಸಿ.ಹರಕುಡೆ
ಸಾಹಿತಿ ಪ್ರಕಾಶ ಸಿ.ಹರಕುಡೆಯವರು ಬೀದರ ಜಿಲ್ಲೆ ಹುಲಸೂರಿನ ಚಂದ್ರಪ್ಪ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೫-೩-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಸಿವಿಲ್, ಎಂ,ಟಿ,ಪಿ, ಎ.ಐ.ಟಿ.ಸಿ.ಪದವಿಧರರಾದ ಇವರು ಕಲಬುರಗಿ ಮಹಾನಗರ ಪಾಲಿಕೆಯ ನಗರ ಯೋಜನೆಯ ಜಂಟಿ ನಿರ್ದೇಶಕರು ಮತ್ತು ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅಮೃತಧಾರೆ', `ಸುಂದರ ಲೋಕ', `ಬಾಳು ಬಂಗಾರ', `ಉತ್ಕರ್ಷ',. 'ಉಜ್ವಲ ಬಾಳಲಿ ಮೂಡಲಿ ಬೆಳಕು', `ಗಂಗಾಜಲ', `ಮಾನವ ಜನ್ಮ ದೊಡ್ಡದು’, `ರಾಮನಾಗದಿದ್ದರೆ ನೀರಾವಣನಾಗಬೇಡ', `ನಿತ್ಯ ಸುಖ', `ಕೂಸನ್ನು ಕೊಂದು ಕಾಶಿಗೆ ಹೋದರೇನು ಫಲ', `ಭಾಗ್ಯೋದಯ', `ಹಣಕ್ಕಾಗಿ ನೀನೇಕೆ ಹೆಣವಾಗುವಿ', `ನಗುತಾ ಮಾಡುವ ಪಾಪ, ಅಳುತಾ ಕಳೆಯ ಬೇಕಾಗುವುದು' ಇವು ಅವರ ಪ್ರಮುಖ ಕೃತಿಗಳಾಗಿವೆ. ಹೀಗೆ ಸಾಹಿತ್ಯ ರಚನೆಯೊಂದಿಗೆ ಗ್ರಾಮದಲ್ಲಿ ನಡೆಯುವ ನಾಟಕಗಳಲ್ಲೂ ಕೂಡ ನಟಿಸುತ್ತಾ ಬಂದಿದ್ದಾರೆ. ಮುಂದೆ ಇವರು ಆಕಸ್ಮಿಕವಾಗಿ ಬೀದರನಲ್ಲಿ ಬರ ಸಿನಿಮಾ ತಂಡ ಪರಿಚಯ ಮಾಡಿಕೊಂಡು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. `ಇಂದ್ರನ ಗೆದ್ದ ನರೇಂದ್ರ’, 'ತುಂಗಭದ್ರ', `ಕೆಂಪಯ್ಯ ಐ.ಪಿ.ಎಸ್’, `ಅಧಿಪತಿ', `ಲೂಟಿಗ್ಯಾಂಗ್’, `ಈಶ್ವರ', `ಲಾಕಪಡೆತ್', ಸಾಂಗ್ಲಿಯಾನ ಭಾಗ-೩, `ಮೀಲ್ಟ್ರಿ ಮಾವಾ'. `ಸಂಭವಾಮಿ ಯುಗೆ ಯುಗೆ', `ಕಪ್ರ್ರೂ,' `ಧೈರ್ಯವಂತ'. ಹೀಗೆ ಸುಮಾರು ಇಪ್ಪತ್ತೈದು ಸಿನಿಮಾಗಳಲ್ಲಿ ಖ್ಯಾತ ನಾಯಕ ನಟರಾದ ವಿಷ್ಣುವರ್ಧನ್, ಅನಂತನಾಗ, ದೇವರಾಜ, ಜಗ್ಗೇಶ್, ಸಾಯಿಕುಮಾರ, ಶಶಿಕುಮಾರ್, ಸುಂದರಕೃಷ್ಣ ಅರಸ, ಧೀರೇಂದ್ರ ಗೋಪಾಲ್ ಮೊದಲಾದವರೊಂದಿಗೆ ನ್ಯಾಯಧೀಶರಾಗಿ, ಉಪನ್ಯಾಸಕರಾಗಿ, ಶಾಸಕರಾಗಿ ಮೊದಲಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಕಾರ್ಯ ಸಾಧನೆಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಬರಹಗಳು ವಿವಿದ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ