ಪುಟಗಳು

ಶುಕ್ರವಾರ, ಜನವರಿ 10, 2025

ಪ್ರೊ.ಶಂಭುಲಿಂಗ ವಿ.ಕಾಮಣ್ಣಾ

ಸಾಹಿತಿ ಶಂಭುಲಿಂಗ ವಿ. ಕಾಮಣ್ಣಾ. ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ವೀರಶೇಟ್ಟೆಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೨೮-೧೧-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾದ ಇವರು ೧೯೮೬ರಿಂದ ಭಾಲ್ಕಿಯ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಚಿಂತನಗಳನ್ನು ಬರೆದಿರುವ ಇವರು ೨೦೦೪ರಲ್ಲಿ `ಚಿಂತನ ಚಿಗುರು' ೨೦೧೨ರಲ್ಲಿ `ಬಾಂದಳದ ಬೆಳಗು' ಎಂಬ ಚಿಂತನ ಕೃತಿಗಳು, ೨೦೧೬ರಲ್ಲಿ `ಶರಣ ಸೌರಭ' ೨೦೧೮ರಲ್ಲಿ `ಶರಣ ದೀಪ್ತಿ' ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಚಿಂತನಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೭ರಲ್ಲಿ ಕಸಾಪ ಬೆಂಗಳೂರಿನಿAದ ಕನ್ನಡ ಶ್ರೀ ಪ್ರಶಸ್ತಿ, ಕನ್ನಡ ಸೇನೆಯಿಂದ ಕನ್ನಡ ರತ್ನ ಪ್ರಶಸ್ತಿ, ಭಾಲ್ಕಿ ತಾಲೂಕು ಆಡಳಿತದಿಂದ ಬಸವ ಶ್ರೀ ಪ್ರಶಸ್ತಿ, ಮತ್ತು ಉತ್ತಮ ಉಪನ್ಯಾಸಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭೀಸಿವೆ. ೨೦೧೭ರಲ್ಲಿ ಇವರಿಗೆ ಭಾಲ್ಕಿ ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ೨೦೦೪ರಲ್ಲಿ ಭಾಲ್ಕಿ ಕಸಾಪದ ಅಧ್ಯಕ್ಷರಾಗಿ, ೨೦೦೮ರಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ