ಶುಕ್ರವಾರ, ಜನವರಿ 10, 2025
ವಿಶ್ವನಾಥ ಮುಕ್ತಾ
ಸಾಹಿತಿ ವಿಶ್ವನಾಥ ಮುಕ್ತಾ ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬಾಬುರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೬೦ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ೧೯೮೩ರಲ್ಲಿ ಬಸವಕಲ್ಯಾಣದ ಶ್ರೀ ಬಸವೇಶ್ವರ ಪ್ರಾಥಮೀಕ ಶಾಲಾ ಶಿಕ್ಷಕರಾಗಿ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ೧೯೯೪ರಲ್ಲಿ `ಸಮ್ಮಿಲನ', `ಮರಿಚಿಕೆ ’, `ಮಣ್ಣಿನ ಹೂ’ (ಕವನ ಸಂಕಲನಗಳು) `ಮುಗಿಲ ಮೆಟ್ಟಿಲು’, `ಅನ್ವೇಷಣೆ’ (ಚಿಂತನೆ) `ಬೆಳಕಿನ ಸಿರಿ, ಕಲ್ಯಾಣ ಕಲಾಶ್ರೀ’ (ಸಂ) `ಮುಕ್ತೇಶ್ವರ ವಚನಗಳು-೧.೨.೩.೪. ಹಾಗೂ `ಮುಕ್ತಿಯ ಸೂತ್ರಗಳು’ `ನೀನಿಲ್ಲದೆ ನಾನಿಲ್ಲ’ (ಆಧುನಿಕ ವಚನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಮತ್ತು ಆಕಾಶವಾಣಿ ಪ್ರಕಟ,ಪ್ರಸಾರವಾಗಿವೆ. ಹಾಗೂ ಸಾಕ್ಷರತೆಯ ಕವನಗಳ ೧ ಧ್ವನಿ ಸುರುಳಿ ೨ ಸಿಡಿಗಳಾಗಿ ಮುದ್ರಿತಗೊಂಡಿವೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ೨೦೧೯ರಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗದಲೆಗಾಂವ ಗ್ರಾಮದಲ್ಲಿ ನಡೆದ ೮ನೇ ತಾಲ್ಲುಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ