ಶುಕ್ರವಾರ, ಜನವರಿ 10, 2025
ಡಾ. ಗಣಪತಿ ಝ.ಸಿಂಧೆ
ಲೇಖಕರಾದ ಡಾ.ಗಣಪತಿ ಝ.ಸಿಂಧೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ಝಟಿಂಗರಾವ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ. ೧-೬-೧೯೫೯ರಲ್ಲಿ ಜನಿಸಿದ್ದಾರೆ. ಎಂ.ಎ, ಎಂ.ಫೀಲ್, ಎಲ್.ಎಲ್.ಬಿ. ಎಂ.ಎಲ್.ಐ.ಎಸ್.ಸಿ. ಪದವಿಧರರಾದ ಇವರು ಹತ್ತು ವರ್ಷ ಖಾಸಗಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ನಂತರ ೧೯೯೫ರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಉಪಗ್ರಂಥ ಪಾಲಕರಾಗಿ ಸೇವೆಗೆ ಸೇರಿ, ಮುಖ್ಯ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷಾ ಪಾಂಡಿತ್ಯ ಹೊಂದಿದ ಇವರು ಆಂಗ್ಲ ಭಾಷೆಯಲ್ಲಿ `ರಿಸರ್ಚ್ ಇನ್ ಸೋಷಿಯಲ್ ಸೈನ್ಸ್' ಎಂಬ ಪುಸ್ತಕ ೨೦೦೪ರಲ್ಲಿ ಬರೆದು ಪ್ರಕಟಿಸಿದ್ದಾರೆ. ಈ ಕೃತಿಗೆ ೨೦೧೨ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. ಇವರ ಬರಹಗಳು ಕೆಲ ಪ್ರಮುಖ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಉತ್ತಮ ಸಂಘಟಕರು ಆಗಿದ್ದರಿಂದ ೨೦೧೧ರಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ವೃತ್ತಿ ಬಾಂಧವರ ಸಂಘವು ಸ್ಥಾಪಿಸಿ, ಅದರ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಹಲವಾರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಗುಲಬರ್ಗಾ, ಮಂಗಳೂರು, ಮೈಸೂರು, ಬೆಂಗಳೂರು, ವಿಶ್ವವಿದ್ಯಾಲಯಗಳ ಆವರಣದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಮಾಡಿದ್ದಾರೆ. ಮಹಾರಾಷ್ಟ್ರದ ನಾಗಪೂರದ ಧಿಕ್ಷಾ ಭೂಮಿಯಲ್ಲಿಯು ಇವರು ಈ ಸಂಘಟನೆಯ ಕಾರ್ಯಕ್ರಮವು ಆಯೋಜನೆ ಮಾಡಿ ಜಾಗೃತಿ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರು ೩೮ ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ಗ್ರಂಥಾಲಯಗಳ ಅನುಭವ ಪಡೆದು ಉತ್ತಮ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಇವರ ಮಿತ್ರ ಬಾಂಧವರು `ಪ್ರೊಫೆಷನಲ್ ಸಸ್ಟೆನನ್ಸ ರಿಚರ್ಸ ಸಪೋರ್ಟ್ ಆ್ಯಂಡ್ ಪ್ರಪ್ರರಿಂಗ್ ಫಾರ್ ನ್ಯಾಕ್ ಇನ್ ಅಕಾಡೆಮಿಕ್’ ಎಂಬ ಅಭಿನಂದನಾ ಗ್ರಂಥವು ಹೊರತಂದಿದ್ದಾರೆ. ಈ ಅಭಿನಂದನಾ ಗ್ರಂಥವನ್ನು ಪಿ.ಎಸ್.ಕಟ್ಟಿಮನಿ ಮತ್ತು ಐ.ಎಸ್.ವಿದ್ಯಾಸಾಗರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ