ಶುಕ್ರವಾರ, ಜನವರಿ 10, 2025
ಪ್ರೊ.ಸಿದ್ದರಾಮಯ್ಯ ಮಠಪತಿ
ಸಾಹಿತಿ ಹಾಗೂ ಸಂಗೀತಗಾರರಾದ ಡಾ. ಸಿದ್ದರಾಮಯ್ಯ ಮಠಪತಿಯವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ಗೊರ್ಟಾ (ಬಿ) ಗ್ರಾಮದ ಪಂ.ವಿರೂಪಾಕ್ಷಯ್ಯ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ ೧-೧೨-೧೯೫೮ರಲ್ಲಿ ಜನಿಸಿದ್ದಾರೆ. ಸಂಗೀತ ಮೇಜರ್ ವಿಷಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರು ಬಾಗಲಕೋಟೆ ಜಿಲ್ಲೆಯ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ೧೯೮೨ರಿಂದ ಸಂಗೀತ ಶ್ರೇಣಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೧೯೯೩ರಲ್ಲಿ `ಸಂಗೀತ ರುದ್ರ’ ೧೯೯೫ರಲ್ಲಿ `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ ಮತ್ತು,೨' ೨೦೦೧ರಲ್ಲಿ 'ಸಂಗೀತ ಶ್ರೀ ರುದ್ರ’ (ಕನ್ನಡ) ೨೦೦೪ರಲ್ಲಿ `ಸಂಗೀತ ಶ್ರೀ ರುದ್ರ' (ಹಿಂದಿ) ೨೦೦೬ರಲ್ಲಿ `ವೀರಶೈವ ಸಂಗೀತಗಾರರು' `ಶ್ರೀ. ಷ.ಬ್ರ.ಗುರುಪಾದ ಶಿವಾಚಾರ್ಯರು’ ೨೦೦೬ರಲ್ಲಿ `ಕರ್ಮಯೋಗಿ ಹುಚ್ಚಪ್ಪಾ ಹತ್ತಿ’ `ಅಕಾಡೆಮಿ ಪ್ರಶಸ್ತಿ ಪುರಸ್ಕೃತರು' ಎಂಬ ಕೃತಿಗಳು ರಚಿಸಿದ್ದು, ಮತ್ತು `ಭಾವಗುಚ್ಚ' `ನಾದ ಲಹರಿ’ `ವಿಶ್ವ ನಿನಾದ’ `ನಾದೊಪಾಸಕ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಸಂಗೀತ ರುದ್ರ ಕೃತಿಗೆ ೧೯೯೩ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸಿ,್ತ ೨೦೦೦ ರೂಪಾಯಿ ಗೌರವ ಧನವು ಪಡೆದರೆ, `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ ಕ್ಕೆ ೧೯೯೫ರಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ೨೦೦೦ ರೂಪಾಯಿ ಪ್ರೋತ್ಸಾಹ ಧನಸಹಾಯ ಪಡೆದಿದೆ.
ಇವರ ಕತೆ,ಲೇಖನ, ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ತುಷಾರ, ಸುಧಾ,ತರಂಗ, ಮೊದಲಾದ ಪತ್ರಿಕೆ ಪ್ರಾತಿನಿಧಿಕ ಸಂಕಲನಗಳಲ್ಲಿ ೨೫೦ಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ಕರ್ನಾಟಕದ ಎಲ್ಲ ಬಾನುಲಿ ಕೇಂದ್ರ ಹಾಗೂ ದೂರದರ್ಶನಗಳಲ್ಲಿ ಸಾಕಷ್ಟು ಸಂಗೀತ ಗೀತ ಗಾಯನ ಕಾರ್ಯಕ್ರಮಗಳು ಪ್ರಸಾರಗೊಂಡು ಮನೆ ಮಾತಾಗಿದ್ದಾರೆ. ಇವರು ಹಾಡಿದ ನೂರಾರು ಗೀತೆಗಳು ಕನ್ನಡ, ಹಿಂದಿಯಲ್ಲಿ ಧ್ವನಿ ಸುರುಳಿಯಾಗಿ ಮುದ್ರಣಗೊಂಡಿವೆ. ಇವರು ರಂಗಭೂಮಿ ಸಂಗೀತ ನಿರ್ದೇಶಕರಾಗಿ, ಹಲವಾರು ನಾಟಕ, ಧಾರಾವಾಹಿಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.ಇವರ ಸಾಹಿತ್ಯ, ಸಂಗೀತ ಕ್ಷೇತ್ರದ ಸಾಧನೆಗೆ ೧೯೮೫ರಲ್ಲಿ ನಾಗಮಂಗಲದ ಗ್ರಂಥ ಗಂಗೋತ್ರಿ ಪ್ರಕಾಶನದ ವತಿಯಿಂದ `ನಿಹಾರಿಕಾ’ ಎಂಬ ಕತೆಗೆ ಅಂತರಾಷ್ಟ್ರೀಯ ಯುವ ಕಥಾ ಪ್ರಶಸ್ತಿ, ೧೯೯೨ರಲ್ಲಿ ಜಗದ್ಗುರು ವಾರಣಾಸಿಯ ಪೀಠದಿಂದ ಸಂಗೀತ ವಿಶಾರದ ಪ್ರಶಸ್ತಿ, ೧೯೯೭ರಲ್ಲಿ ಬೆಂಗಳೂರಿನ ವೀರಶೈವ ಸಮನ್ವಯ ವೇದಿಕೆಯಿಂದ ಸ್ವರಶ್ರೀ ಪ್ರಶಸ್ತಿ, ೨೦೦೪ರಲ್ಲಿ ಗಾನಯೋಗಿ ಪಂ.ಪAಚಾಕ್ಷರಿ ಗಾನಕಲಾ ಪರಿಷತ್ ಗೋಕಾಕ್ ವತಿಯಿಂದ ಸಂಗೀತ ಝೆಂಕಾರ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ೧೯೯೪ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ೧೯೯೮ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೋರ್ಡ ಆಫ್ ಸ್ಟಡೀಸ್ (ಹಿಂದೂಸ್ತಾನಿ ಸಂಗೀತ) ಸದಸ್ಯರಾಗಿ, ೧೯೯೯ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ೨೦೦೧ರಲ್ಲಿ ಅಲಹಾಬಾದನಲ್ಲಿ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಪ್ರಯಾಗ್ ಸಂಗೀತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಹಲವಾರು ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುವುದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ೧೩ ಉತ್ತಮ ಪುಸ್ತಕಗಳು ಬರೆದಿರುವುದರಿಂದ ಇವರಿಗೆ ಮುಚಳಂಬ ಗ್ರಾಮದಲ್ಲಿ ನಡೆದ ಬಸವಕಲ್ಯಾಣದ ೩ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ