ಪುಟಗಳು

ಶುಕ್ರವಾರ, ಜನವರಿ 10, 2025

ಜಗದೇವಿ ದುಬಲಗುಂಡೆ.

ಹಿರಿಯ ಸಾಹಿತಿ ಜಗದೇವಿ ದುಬಲಗುಂಡೆಯವರು ಬೀದರ ಜಿಲ್ಲೆ ಬಸವಕಲ್ಯಾಣದ ಗುರುಪಾದಪ್ಪಾ ಮೆಟಗೆ ಮತ್ತು ಭಾಗೀರಥಿಬಾಯಿ ದಂಪತಿಗಳಿಗೆ ದಿನಾಂಕ ೯-೬-೧೯೪೯ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ೮ನೇ ತರಗತಿಯವರೆಗೆ ಮಾತ್ರ ನಂತರ ಖಾಸಗಿ ಅಭ್ಯಾರ್ಥಿಯಾಗಿ ಎಸ್.ಎಸ್.ಎಲ್.ಸಿ.ಪಾಸು ಮಾಡಿ ೧೯೮೬ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿ ೨೦೦೭ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ತೋಟಗಾರಿಕೆ ಇಲಾಖೆಯಿಂದ ನಿವೃತ್ತರಾಗಿದ್ದಾರೆ. ಇವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ರಾಮಪ್ಪಾ ದುಬಲಗುಂಡೆಯವರ ಧರ್ಮ ಪತ್ನಿಯಾಗಿದ್ದು, ೨೦೦೮ರಲ್ಲಿ `ಅಪರೂಪದ ಅಪ್ಪ' ಎಂಬ ಜೀವನ ಚರಿತ್ರೆ, ಹಾಗೂ `ವಚನ ಕುಸುಮ’ ಎಂಬ ಆಧುನಿಕ ವಚನ ಸಂಕಲನ ೨೦೧೨ರಲ್ಲಿ `ಸಂಸ್ಕೃತಿ ಸಿಂಚನ' ಎಂಬ ಜಾನಪದ ಕೃತಿ, ೨೦೧೫ರಲ್ಲಿ `ಕಾವ್ಯ ತೊರಣ' ಎಂಬ ಕೃತಿಗಳು ರಚಿಸಿದ್ದಾರೆ. ಇವರು `ಸಿದ್ದರಾಮ ಪ್ರಿಯ ಬಸವನ ಶಿಶು' ಎಂಬ ಅಂಕಿತನಾಮದಿAದ ವಚನಗಳು ಮತ್ತು `ಗುರುಸಿದ್ದ ಬಸವ' ಎಂಬ ಕಾವ್ಯನಾಮದಿಂದ ಬರೆದ ಕವನಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಕಲ್ಯಾಣದ ಅನುಭವ ಮಂಟಪದ ೩೭ನೇ ಶರಣ ಕಮ್ಮಟದಲ್ಲಿ ಇವರ `ಸಂಸ್ಕೃತಿ ಸಿಂಚನ' ಎಂಬ ಕೃತಿಗೆ `ಕ್ರಾಂತಿ ಗಂಗೋತ್ರಿ ಅಕ್ಕನಾಗಾಂಬಿಕಾ ಪುಸ್ತಕ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಶರಣ ರತ್ನ' ಪ್ರಶಸ್ತಿಯು ಪಡೆದಿದ್ದಾರೆ. ೨೦೧೩ರಲ್ಲಿ ಬಸವಕಲ್ಯಾಣ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದ ೨ನೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ