ಶುಕ್ರವಾರ, ಜನವರಿ 10, 2025
ವಿಶ್ವನಾಥಯ್ಯಾ ಮಠಪತಿ
ಹಸ್ತಪ್ರತಿ ಸಂಶೋಧಕ ಹಾಗೂ ಲೇಖಕರಾದ ವಿಶ್ವನಾಥಯ್ಯಾ ಮಠಪತಿಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದ ಹಿರಿಯ ಸಾಹಿತಿ ವಿರೂಪಾಕ್ಷಯ್ಯಾ ಸ್ವಾಮಿ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೧೪-೭-೧೯೫೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ವರೆಗೆ ಅಧ್ಯಯನ ಮಾಡಿದ ಇವರು. ಹುಟ್ಟೂರಿನ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆಯಲ್ಲಿ ೧೯೭೪ರಿಂದ ಕರುಣಿಕರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ.
ತಮ್ಮ ವೃತ್ತಿ ಜೀವನದೊಂದಿಗೆ ೨೦ವರ್ಷ ಸತತವಾಗಿ ಹಳೆ ಮನೆ, ಮಠಗಳಿಗೆ ಬೇಟಿ ನೀಡಿ ೧೦೦ ಕಟ್ಟು ಹಸ್ತಪ್ರತಿಗಳು ಸಂಗ್ರಹಿಸಿದರಿAದ ವಿವಿಧ ವಿಶ್ವವಿದ್ಯಾಲಯದ ಉಪನ್ಯಾಸಕರು, ಸಂಶೋಧಕರು ಹಾಗೂ ಧಾರವಾಡದ ಖ್ಯಾತ ಸಾಹಿತಿ ಎಂ.ಎA.ಕಲ್ಬುರ್ಗಿಯವರು ಸೇರಿದಂತೆ ಮೊದಲಾದವರು ಇವರ ಕಾರ್ಯಕ್ಕೆ ಪ್ರಶಂಸೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರು ಈ ಹಸ್ತಪ್ರತಿಗಳು ಸಂಗ್ರಹಿಸಿದಷ್ಟೇಯಲ್ಲದೆ ಅವುಗಳು ಅಧ್ಯಯನ ಮಾಡಿ ಹೊಸಗನ್ನಡ ರೂಪದಲ್ಲಿ ಮುದ್ರಣ ಮಾಡಿದ್ದಾರೆ. ಮತ್ತು ಹೊಸಗನ್ನಡ ಹಸ್ತಪ್ರತಿ ಕಾರ್ಯವನ್ನು ತಮ್ಮ ಮಗ ಡಾ.ರುದ್ರಮಣಿ ಮಠಪತಿ ಅವರೊಂದಿಗೆ ೨೦೦೭ರಲ್ಲಿ `ಹರಿಹರ ಮಹತ್ವ’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಹತ್ತಿರ ಬಸವಗಣ, ಶಿಖಾಮಣಿ ಹಾಗೂ ಅನೇಕ ಅಪ್ರಕಟಿತ ವಚನಗಳು ಮತ್ತು ಕೃತಿಗಳು ಲಭ್ಯ ಇವೆ. ಇವರ ಬರಹ ಲೇಖನಗಳು ಬಸವಪಥ ಮಾಸಪತ್ರಿಕೆಯಲ್ಲಿಯೂ ಪ್ರಕಟವಾಗಿವೆ. ಇವರಿಗೆ ಬೀದರ ಜಿಲ್ಲಾ ಸಂಶೋಧಕರು ಮತ್ತು `ಸಂಶೋಧನಾ ರತ್ನ’ ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ