ಪುಟಗಳು

ಶುಕ್ರವಾರ, ಜನವರಿ 10, 2025

ಶಿವಪುತ್ರಪ್ಪಾ ಕಣಜೆ

ಆಧುನಿಕ ವಚನಕಾರ ಶಿವಪುತ್ರಪ್ಪ ಕಣಜೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಅಣ್ಣೆಪ್ಪಾ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೬ ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಮುಂದೆ ಓದಲು ಆಗದೆ ಕೃಷಿಯಲ್ಲಿ ತೊಡಗಿ ಪ್ರಗತಿಪರ ರೈತ,ಸಮಾಜ ಸೇವಕ, ಬಸವತತ್ವ ಪ್ರಚಾರಕರಾಗಿ ಶರಣರ ಆದರ್ಶ ಜೀವನ ಮತ್ತು ವಚನ ಸಾಹಿತ್ಯಕ್ಕೆ ಮಾರು ಹೋಗಿ ೨೦೧೭ರಲ್ಲಿ `ವಚನ ಪರಿಮಳ' ಎಂಬ ಆಧುನಿಕ ವಚನ ಸಂಕಲನವು ಪ್ರಕಟಿಸಿದ್ದಾರೆ. `ನಿಮ್ಮ ಶಿವಪುತ್ರ ಗುರುಬಸವ ಭಕ್ತರ ತೊತ್ತು.' ಎಂಬುದು ಅವರ ಅಂಕಿತನಾಮವಾಗಿದೆ. ಇವರಿಗೆ ಬೀದರದ ಕಂಬಳಿವಾಲೆ ಪ್ರತಿಷ್ಠಾನ ಮತ್ತು ಸಸ್ತಾಪೂರದ ಯಲ್ಲಾಲಿಂಗೇಶ್ವರ ಆಶ್ರಯದಲ್ಲಿ ನಡೆಯುವ ಆಧುನಿಕ ವಚನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ