ಶುಕ್ರವಾರ, ಜನವರಿ 10, 2025
ಡಾ. ರೇಖಾ ಜ್ಯೊತೆಪ್ಪ (ಮಹಾಜನ್)
ಸಾಹಿತಿ ಡಾ.ರೇಖಾ ಜ್ಯೊತೆಪ್ಪ (ಮಹಾಜನ್)ರವರು. ಬೀದರ ಜಿಲ್ಲೆ ಕಮಲನಗರ ತಾಲೂಕಿನ ಗುರುನಾಥಪ್ಪ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಲಸೂರು ತಾಲೂಕಿನ ಮುಚಳಂಬದ ಶಿವರಾಜ ಜ್ಯೊತೆಪ್ಪರವರ ಧರ್ಮ ಪತ್ನಿಯಾಗಿದ್ದು. ೧೯೮೪ರಲ್ಲಿ ಗೋರ್ಟಾ (ಬಿ) ಗ್ರಾಮದ ಶ್ರೀ ಗುರುಪಾದ ಶಿವಾಚಾರ್ಯ ಪ.ಪೂ. ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಂತರ ೧೯೮೫ರಲ್ಲಿ ಭಾಲ್ಕಿಯ ಸತ್ಯಾನಿಕೇತನ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದಾರೆ. ೨೦೦೮ರಲ್ಲಿ `ಸ್ಮೃತಿ ಗಂಧ' ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದು, ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೭ರಲ್ಲಿ ನವದೆಹಲಿಯ ಭಾರತೀಯ ಶಾಂತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಭಾಲ್ಕಿ ಮಠದಿಂದ `ಡಾ.ಚನ್ನಬಸವ ಪಟ್ಟದೇವರು ಪ್ರಶಸ್ತಿ, ೨೦೦೨ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೧೫ರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರತಿಷ್ಠಾನದ ವತಿಯಿಂದ ಆದರ್ಶ ದಾಂಪತ್ಯ ಪ್ರಶಸ್ತಿ, ೨೦೧೬ರಲ್ಲಿ ಬೆಂಗಳೂರಿನ ವಂದೇ ಮಾತರಂ ಸಾಂಸ್ಕೃತಿಕ ಸಂಸ್ಥೆಯಿAದ ಸಮಾಜ ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ, ಸದ್ಯ ಇವರು ಭಾಲ್ಕಿಯ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ, ಜಾನಪದ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನ ಮೊದಲಾದವುಗಳಲ್ಲಿ ಭಾಗವಹಿಸಿ ಕವನ ವಾಚನ, ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಕುರಿತು ಸಾಹಿತಿ ಸಿ.ಎಸ್.ಆನಂದ ಮತ್ತು ವೀರಣ್ಣ ಕುಂಬಾರ ರವರು `ಶಿವ-ರೇಖಾ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ