ಶುಕ್ರವಾರ, ಜನವರಿ 10, 2025
ಲಕ್ಷ್ಮೀಬಾಯಿ ಪಾಟೀಲ್
ಕವಯತ್ರಿ ಲಕ್ಷಿö್ಮÃಬಾಯಿ ಪಾಟೀಲ್ ರವರು ಮಹಾರಾಷ್ಟ್ರದ ಲಾತೂರ ಜಿಲ್ಲೆ ಔಸಾದ ಚನ್ನಪ್ಪಾ ಪುಲಾರೆ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೩-೯-೧೯೪೬ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಡಿ.ಎಡ್.ಮತ್ತು ಹಿಂದಿ ಪದವಿ ಪಡೆದ ಇವರು ೧೯೭೭ರಲ್ಲಿ ಶಿಕ್ಷಕರಾಗಿ ನೇಮಕಗೊಂಡು, ಹುಲಸೂರ ತಾಲೂಕಿನ ಗಡಿಗ್ರಾಮ ಕೊಟಮಾಳದಲ್ಲಿ ಸೇವೆಗೆ ಸೇರಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಇವರು ಕಲಿತದ್ದು ಮಾರಾಠಿಯಾದರು ಕನ್ನಡ ಸ್ವಂತ ಅಂಕಲಿಪಿ ಮೂಲಕ ಕಲಿತುಕೊಂಡು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ ೨೦೦೭ರಲ್ಲಿ `ಕಾಲಚಕ್ರ' ಎಂಬ ಕವನ ಸಂಕಲನ ಕನ್ನಡದಲ್ಲಿ ಬರೆದು ಪ್ರಕಟಿಸಿದ್ದಾರೆ. ಮತ್ತು ಸಾಹಿತಿ ವಿ.ಸಿದ್ದರಾಮಣ್ಣನವರು ರಚಿಸಿದ `ವಿಶ್ವಾತ್ಮ ಬಸವಣ್ಣ', `ಅಕ್ಕ ಮಹಾದೇವಿ', `ಕ್ರಾಂತಿ ಕಲ್ಯಾಣ', `ಮೊಳಿಗೆಯ ಮಾರಯ್ಯ', `ಮಾದಾರ ಚನ್ನಯ್ಯ', `ವೀರಾ ಗಣಾದೀಶ ಮಡಿವಾಳ ಮಾಚಿದೇವ'. ಎಂಬ ನಾಟಕಗಳು, ಹಾಗೂ ಬಸವ ಟಿವಿ ಮುಖ್ಯಸ್ಥರಾದ ಈ ಕೃಷ್ಣಪ್ಪಾನವರು ಬರೆದ `ದೇವರ ಸ್ವರೂಪ' `ಇಷ್ಟಲಿಂಗ ಪೂಜಾ ವಿಧಾನ' ಎಂಬ ಕೃತಿಗಳು ಕನ್ನಡದಿಂದ ಮರಾಠಿಗೆ ಅನುವಾದಿಸಿದ್ದಾರೆ. `ಹೂಗಾರ ಕಂದ’ ಎಂಬ ಅಂಕಿತದಲ್ಲಿ ನೂರಾರು ಆಧುನಿಕ ವಚನಗಳು ರಚಿಸಿದ್ದಾರೆ. ಇವರ ಕವನ, ಲೇಖನ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಆಕಾಶವಾಣಿ, ಬಸವ ಟಿವಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ೨೦೧೪ರಲ್ಲಿ ಲಾತೂರಿನಲ್ಲಿ ನಡೆದ ಬಸವ ಮಹಾಮೇಳದ `ಸಮಾಜ ಭೂಷಣ್ ಪ್ರಶಸಿ’, ಸೇರಿದಂತೆ ಮೊದಲಾದವು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ