ಪುಟಗಳು

ಶುಕ್ರವಾರ, ಜನವರಿ 10, 2025

ಡಾ. ರುದ್ರಮಣಿ ಮಠಪತಿ

ಯುವ ಸಾಹಿತಿ ಡಾ.ರುದ್ರಮಣಿ ಮಠಪತಿಯವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ವಿಶ್ವನಾಥಯ್ಯಾ ಮತ್ತು ವಿಮಲಾಬಾಯಿ ದಂಪತಿಗಳಿಗೆ ೫-೭-೧೯೮೧ರಂದು ಜನಿಸಿದ್ದಾರೆ. ಇವರು ಸಾಹಿತ್ಯ , ಸಂಸ್ಕೃತಿಯ ಪರಿಸರದಲ್ಲಿಯೆ ಬೆಳೆದವರು. ಇವರ ಮುತ್ತಜ್ಜ ಶಿವಲಿಂಗಯ್ಯ ಬೀದರ ಜಿಲ್ಲೆಯ ಪ್ರಥಮ ಡೊಪ್ಪಿನಾಟ ರಚನಾಕಾರರು. ಅಜ್ಜ ವಿರೂಪಾಕ್ಷಯ್ಯಾ ಸ್ವಾಮಿ ಸಾಹಿತಿ ಹಾಗೂ ಸಂಗೀತಕಾರರು ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಇವರ ತಂದೆ ವಿಶ್ವನಾಥಯ್ಯಾ ಕೂಡ ಸಂಗಿತಕಾರರಾಗಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ತಂದೆ ವಿಶ್ವನಾಥಯ್ಯನವರ ಜೊತೆಗೂಡಿ ೨೦೦೬ರಲ್ಲಿ `ಹರಿಹರ ಮಹತ್ವ' ಮತ್ತು ೨೦೨೦ರಲ್ಲಿ `ಭಕ್ತಿಯ ಬೀಜ’ ಎಂಬ ಆಯ್ದ ವಚನಕಾರರ ೧೦೮ ವಚನಗಳ ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೧೭ ಮಾರ್ಚ ೧೩ರಂದು ಬಸವಕಲ್ಯಾಣ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮೂರು ತಾಲೂಕಾ ಸಾಹಿತ್ಯ ಸಮ್ಮೇಳನ ಒಂದು ಯುವ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಅಷ್ಟೆಯಲ್ಲದೆ ೧೦೦ಕ್ಕಿಂತಲೂ ಹೆಚ್ಚು ಕವಿತೆಗಳನ್ನು ರಚನೆ ಮಾಡಿದ ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಇತರರು ಸಂಪಾಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ನಾಥ ಪಂಥ ಒಂದು ಸಾಂಸ್ಕೃತಿಕ ಅಧ್ಯಾಯನ' ಇದು ಇವರ ಪಿ.ಎಚ್.ಡಿ ಮಹಾಪ್ರಬಂಧವಾಗಿದೆ. ಸದ್ಯ ಇವರು ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ