ಪುಟಗಳು

ಶುಕ್ರವಾರ, ಜನವರಿ 10, 2025

ಪ್ರೊ. ಧನರಾಜ ನೀಲಾ.

ಉದಯೋನ್ಮಖ ಯುವ ಬರಹಗಾರರಲ್ಲಿ ಪ್ರಮುಖವಾಗಿ ಬೀದರ ಜಿಲ್ಲೆಯ ಕಾವ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರೆಂದರೆ ಪ್ರೊ. ಧನರಾಜ ನೀಲಾ ರವರು. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮೀನಕೇರಾ ಗ್ರಾಮದ ಹಿರಿಯ ಜಾನಪದ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಕಾಶಿನಾಥ ನೀಲಾ ಮತ್ತು ಶ್ರೀಮತಿ ಮಲ್ಲಮ್ಮ ನೀಲಾ ದಂಪತಿಗಳಿಗೆ ದಿನಾಂಕ ೨೩-೦೫-೧೯೯೦ ರಲ್ಲಿ ಜನಿಸಿದ್ದಾರೆ. ಎಂ. ಎಸ್ಸಿ, (ಪಿ.ಎಚ್.ಡಿ) ಪದವಿಧರರಾದ ಇವರು ಕಲಬುರ್ಗಿಯ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದಲ್ಲಿ ಎಂಜಿನೀರಿಂಗ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗಣಿತ ಉಪನ್ಯಾಸಕನಾಗಿ ಸೇವೆ ಸಲ್ಲಿಸುವದರೊಂದಿಗೆ ಪಿ.ಎಚ್.ಡಿ ಪದವಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕವಾಗಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಜಾನಪದ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನ, ಚುಟುಕು, ಹನಿಗವನ, ಲೇಖನ ಮೊದಲಾದ ಬರಹಗಳ ರಚನೆಯಲ್ಲಿ ತೊಡಗಿಸಿಕೊಂಡು ಕವಿ, ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡಿದ್ದಾರೆ. ಮತ್ತು ೨೦೧೪ ರಲ್ಲಿ `ಆರದಿರಲಿ ಜ್ಯೋತಿ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಹಲವಾರು ಕವನ, ಲೇಖನ, ಬರಹಗಳು ಕೆಲ ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಮತ್ತು ಕಲಬುರಗಿಯ `ದಾಸೋಹ ರತ್ನ’ ಮಾಸ ಪತ್ರಿಕೆ ಸೇರಿದಂತೆ ಮೊದಲಾದ ದಿನ ಪತ್ರಿಕೆಗಳಲ್ಲಿ ಹಾಗೂ `ಶರಣ ಸಾಧನೆ’ ಮೊದಲಾದ ಪ್ರಾತಿನಿಧಿಕ ಸಂಕಲನಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಯವರಿAದ ಹಾಗೂ ಕಲಬುರಗಿಯ ಪೂಜ್ಯ. ಶ್ರೀ ಡಾ.ಶರಬಸವಪ್ಪ ಅಪ್ಪ ಅವರಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ