ಪುಟಗಳು

ಶುಕ್ರವಾರ, ಜನವರಿ 10, 2025

ಜಿ.ಎನ್.ಕದಂ

ಗಡಿನಾಡಿನ ಮರಾಠಿ ಸಾಹಿತಿ ಜಿ.ಎನ್.ಕದಂ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೩೩ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಜಾಲಂದರನಾಥ ನಾರಾಯಣ ಕದಮ್' ಎಂದಾಗಿದೆ. ಬಿ.ಎ. ಬಿ.ಇಡಿ. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ೩೮ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ, ದಿನಾಂಕ ೯-೭-೨೦೧೩ರಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರಿಂದ ಅವರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿದ್ದು ಮತ್ತು ಆ ಭಾಷೆಯಲ್ಲಿಯೆ ಸಾಹಿತ್ಯ ರಚಿಸಿದ್ದಾರೆ. `ಸುಗಂಧಿ ಸುಮನೆ, ಪಹಾಟ, ನಾಥ ಚಾ ಚುರಾನಿ, ಆಶೆಹಿ ಮಾನಸ ನಾಮ ವಾಜಲೇಲೆ' ಇತ್ಯಾದಿ ಕೃತಿಗಳು ರಚಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಪುಣ್ಯ ನಗರಿ, ಎಕ್ ಜೂಟ್, ಸಕಾಳ್ ಮೊದಲಾದ ಮರಾಠಿ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಕರ್ನಾಟಕ ರಾಜ್ಯದ ಮರಾಠಿ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ