ಶುಕ್ರವಾರ, ಜನವರಿ 10, 2025
ಮಾಧವರಾವ ನಾರಾಯಣ ಕದಮ್
ಗಡಿನಾಡಿನ ಮರಾಠಿ ಸಾಹಿತಿ ಮಾಧವರಾವ ನಾರಾಯಣ ಕದಮ್. ಇವರು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ ೧೮-೯-೧೯೩೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮರಾಠಿ ಭಾಷೆಯಲ್ಲಿ ಕತೆ, ಕವನ ,ಲೇಖನ, ಕಾದಂಬರಿಗಳನ್ನು ಬರೆದ ಇವರು `ಕ್ಷಿತಿಜಾ ಪಿರಗರಗರಾ, ಪಾಟಾಂಚಾ ಪಾನಿ, ಮಾತಿ ಚಾ ಒಲವಾ, ಮಜ ಯಾ ಕವಿತಾ, ಪ್ರಸ್ಥಾನ ಮತ್ತು ಮನತಲ್ಯಾಗೋಷ್ಠಿ ' ಎಂಬ ಕವನ ಸಂಕಲನಗಳು, ಹಾಗೂ `ಖುರಾಫ್' ಎಂಬ ಕಾದಂಬರಿ ರಚಿಸಿ ಪ್ರಕಟಿಸಿದ್ದಾರೆ. ಈ ಕಾದಂಬರಿ ಮಹಾರಾಷ್ಟ್ರ ನಾಂದೇಡ ಜಿಲ್ಲೆಯ ಶ್ರೀ ರಾಮಾನಂದ ತೀರ್ಥ ವಿಶ್ವವಿದ್ಯಾಲಯದ ಬಿ.ಎ.ಪ್ರಥಮ ವರ್ಷದ ಮರಾಠಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿದೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಸಕಾಳ್, ಎಕ್ ಜೂಟ್ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ