ಮಂಗಳವಾರ, ಜನವರಿ 14, 2025
ಪರಮೇಶ್ವರ ಬಿ.ಬಿರಾದಾರ
ಯುವ ಬರಹಗಾರ ಪರಮೇಶ್ವರ ಬಿ.ಬಿರಾದಾರ ರವರು ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ಬಸವರಾಜ ಬಿರಾದಾರ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೬-೧-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಬರೆದಿದ್ದು, ಅವು ವಿಜಯ ಕರ್ನಾಟಕ, ವಿಜಯ ವಾಣಿ, ಸಂಯುಕ್ತ ಕರ್ನಾಟಕ, ಉದಯಕಾಲ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಸಂಪಾದಕರಾಗಿ `ನಿನ್ನಂತರAಗ' ಹಾಗೂ `ಅನನ್ಯ' ಎಂಬ ನಿಯತಕಾಲಿಕೆಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧಗಳಿಗೆ ನಾಡಿನ ವಿವಿಧ ಸ್ಪರ್ಧೆಯಲ್ಲಿ ಬಹುಮಾನ, ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಬೀದರ ಜಿಲ್ಲೆಗೆ ಸಂಬAಧಿಸಿದ ಕೆಲ ಸಾಕ್ಷ್ಯಚಿತ್ರಗಳು ಕೂಡ ತಯಾರಿಸಿದ್ದು ಅವು ತುಮಕೂರಿನ ಸಿದ್ಧಾರ್ಥ್ ಟಿ.ವಿ.ಚಾನಲ್ನಲ್ಲಿ ಇವರ ಸಂದರ್ಶನದೊAದಿಗೆ ಪ್ರಸಾರವಾಗಿವೆ. ಹಾಗೂ ೯೦.೮. ಎಫ್.ಎಂ. ರೇಡಿಯೋ ನಲ್ಲಿಯೂ ಇವರ ಕೆಲ ಕಾರ್ಯಕ್ರಮಗಳು ಬಿತ್ತರಗೊಂಡಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ