ಮಂಗಳವಾರ, ಜನವರಿ 14, 2025
ಮುಕುಂದರಾವ ಖಾನಾಪುರ
ಸಾಹಿತಿ ಮುಕುಂದರಾವ ಖಾನಾಪುರ ರವರು ಔರಾದ ತಾಲೂಕಿನ ಖಾನಾಪುರ ಗ್ರಾಮದ ಪುಂಡಲೀಕರಾವ ಮತ್ತು ವಿಠಾಬಾಯಿ ದಂಪತಿಗಳಿಗೆ ದಿನಾಂಕ ೫-೩-೧೯೩೫ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಬಿ.ಎ.ಎಲ್.ಎಲ್.ಬಿ. ಪದವಿಧರರಾದ ಇವರು ಬಿ.ಶ್ಯಾಮಸುಂದರ ಅವರ ಅನುಯಾಯಿಗಳಾಗಿದರು. ಮತ್ತು ನಾಂದೇಡದಲ್ಲಿ ಬಿ.ಶ್ಯಾಮಸುಂದರ ಹೆಸರಿನಲ್ಲಿ ಶಾಲೆ ತೆರೆದು ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅದು ಇಂದಿಗೂ ಕಾರ್ಯರಂಭ ಮಾಡುತ್ತಿದೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕತೆ ಕವನ ಲೇಖನಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ. ಇವರು ೧೯೮೯ರಲ್ಲಿ ಬೀದರ ಸಂಸದ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ