ಶುಕ್ರವಾರ, ಜನವರಿ 10, 2025
ಸಂಗಮೇಶ್ವರ ಮುರ್ಕೆ
ಯುವ ಸಾಹಿತಿ ಸಂಗಮೇಶ್ವರ ಮುರ್ಕೆಯವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸೂರ್ಯಕಾಂತ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಕನ್ನಡ, ಮರಾಠಿ, ಹಿಂದಿ ಭಾಷ್ಯಾ ಪ್ರಾವೀಣ್ಯತೆ ಹೊಂದಿದ ಇವರು ಬಿ,ಎ, ಡಿ,ಇಡಿ, ಪದವಿಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೨ರಲ್ಲಿ `ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ' ೨೦೧೧ರಲ್ಲಿ `ಸಂತ ಶ್ರೀ ಹರಿನಾಥ ಚರಿತ್ರೆ' ಎಂಬ ಕೃತಿಗಳು ಪ್ರಕಟಿಸಿದರೆ, ೨೦೧೧ರಲ್ಲಿ `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ' ಎಂಬ ಮರಾಠಿ ಕೃತಿಯು ಅನಂತ ಚಂಪಾಯಿ ಮಾಧವ ಕದಂ ಅವರೊಂದಿಗೆ ಸಂಪಾದಿಸಿದ್ದಾರೆ. ೨೦೧೨ರಲ್ಲಿ `ಹನಿ ಹನಿ ಜೇನ ಹನಿ' ಎಂಬ ಹನಿಗವನ ಸಂಕಲನ, ೨೦೧೭ರಲ್ಲಿ `ಸಾಧಕರು' ಎಂಬ ವ್ಯಕ್ತಿ ಚಿತ್ರಗಳ ಕೃತಿಯೊಂದು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ