ಪುಟಗಳು

ಶುಕ್ರವಾರ, ಜನವರಿ 10, 2025

ಡಾ. ಶಿವಲೀಲಾ ಮಠಪತಿ

ಕವಯತ್ರಿ ಡಾ. ಶಿವಲೀಲಾ ಮಠಪತಿ. ಇವರು ಕಲಬುರಗಿ ಜಿಲ್ಲೆ ಚಿತ್ತಾಪೂರದ ವೀರಯ್ಯಾ ಸ್ಥಾವರಮಠ ಮತ್ತು ಸೌಭಾಗ್ಯಮ್ಮ ದಂಪತಿಗಳಿಗೆ ದಿನಾಂಕ ೧೬-೯-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಕಮಲನಗರ ತಾಲೂಕಿನ ಖೇಡ (ಸಂಗಮ) ಶಾಂತಲಿಂಗ ಮಠಪತಿಯವರ ಧರ್ಮಪತ್ನಿಯಾಗಿದ್ದು, ಇವರು ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ೨೦೧೮ರಲ್ಲಿ `ಶರಣ ಸಂಸ್ಕೃತಿ ಮತ್ತು ಐತಿಹಾಸಿಕ ಚಿಂತನೆ' ಎಂಬ ಚಿಂತನ ಕೃತಿಯು ಪ್ರಕಟಿಸಿದ್ದಾರೆ. `ಶ್ರೀರಾಮಚಂದ್ರ ಮಿಷನ್ನಿನ ಚಾರಿತ್ರಿಕ ಅಧ್ಯಯನ' ಇದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಮಹಿಳಾ ಕದಳಿ ವೇದಿಕೆಯ ಉಪಾಧ್ಯಕ್ಷರಾಗಿ, ಬಸವಕಲ್ಯಾಣ ತಾಲೂಕಿನ ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಹುಲಸೂರಿನ ಕಸಾಪ ಅಧ್ಯಕ್ಷರಾಗಿ ಸೇವ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ