ಶುಕ್ರವಾರ, ಜನವರಿ 10, 2025
ಅನಂತ ಕದಮ್
ಮರಾಠಿ ಉದಯೋನ್ಮುಖ ಬರಹಗಾರ ಅನಂತ ಕದಮ್. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸಾಹಿತಿ ಮಾಧವರಾವ ಮತ್ತು ಚಂಪಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಉದಗಿರ ತಾಲೂಕಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಮರಾಠಿಯಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮತ್ತು `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ' ಎಂಬ ಕೃತಿಯು ಗ್ರಾಮದ ಸಾಹಿತಿ ಸಂಗಮೇಶ್ವರ ಎಸ್.ಮುರ್ಕೆಯವರೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಏಕ್ ಜೂಟ್, ಸಕಾಳ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಉದಗಿರ ನಗರದಲ್ಲಿ `ಚಲಾ ಕವಿತಾಚ ಬನಾತ' ಎಂಬ ವೇದಿಕೆಯು ರೂಪಿಸಿಕೊಂಡು ೩೦೦ಕ್ಕೂ ಅಧಿಕ ಮರಾಠಿ ಸಾಹಿತ್ಯದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ