ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ರಾಜೇಂದ್ರ ಯರನಾಳೆ

ಹಿರಿಯ ಸಾಹಿತಿ ಡಾ.ರಾಜೇಂದ್ರ ಯರನಾಳೆಯವರು. ಬೀದರ ಜಿಲ್ಲೆ ಕಮಲನಗರ ತಾಲೂಕಿನ ಠಾಣಾ ಕುಸನೂರ ಗ್ರಾಮದ ೧೫-೧೦-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಡಿ.ಫಾರ್ಮಸಿ, ಡಿ.ಓ.ಎಂ. ಎಚ್. ಡಿ.ಎಂ.ಎA.ಎಚ್. ಪದವಿ ಪಡೆದ ಇವರು ೧೯೯೩ರಲ್ಲಿ ಹುಮನಾಬಾದಿನ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ ಇವರು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಗುರುಮಿಠಕಲ್ ಸ.ಪ.ಪೂ.ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾಗಿ, ೨೦೧೭ರಿಂದ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಸ.ಪ.ಪೂ.ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ೧೧ವರ್ಷ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯದಲ್ಲಿ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೧೯೮೭ರಲ್ಲಿ `ಬಯಕೆ ಒಲವು ನೆನೆಯಿತು.' (ಕವನ ಸಂಕಲನ) ೧೯೮೭ರಲ್ಲಿ `ಗೌಡನ ತಂತ್ರ ರಾಣಿಗೆ ಮಂತ್ರ' ೨೦೦೦ರಲ್ಲಿ `ಹುಗ್ಗಿ ತುಪ್ಪ ಮಜಾ ಮಜಾ ನೋಡಪ್ಪ’ (ಏಕಾಂಕ ನಾಟಕಗಳು) ೧೯೮೮ರಲ್ಲಿ `ಮೊಮ್ಮಕ್ಕಳ ಭಾಗ್ಯ ಸಂಗ್ಗವ್ವಜ್ಜಿಗ್ಯಾಕ್ಕಿಲ್ಲ' (ಮಿನಿ ಕಾದಂಬರಿ) ೨೦೦೪ರಲ್ಲಿ `ಹೆಸರಿಲ್ಲದವನು' (ಕಥಾ ಸಂಕಲನ) `ಹುಚ್ಚನ ಗೀಚು' (ಆಧುನಿಕ ವಚನಗಳು) ೧೯೯೦ರಲ್ಲಿ `ಮರೆಯದ ಚಿತ್ರಗಳು' (ವ್ಯಕ್ತಿ ಚಿತ್ರ) ೧೯೯೬ರಲ್ಲಿ `ವಿಶ್ವ ವಿಖ್ಯಾತ ಬಿದ್ರಿಕಲೆ' (ಸಂಶೋಧನೆ) ಈ ಕೃತಿ ಹಿಂದಿ ಭಾಷೆಗೆ ಅನುವಾದಗೊಂಡಿದೆ. ೨೦೦೦ರಲ್ಲಿ `ಬೀದರ ಜಿಲ್ಲೆಯ ಪ್ರಾದೇಶಿಕ ಭಾಷಾ ವೈಶಿಷ್ಟ್ಯ' ೨೦೦೧ರಲ್ಲಿ `ಪೂರ್ವಜ್ಞ ವಚನಗಳು ಒಂದು ಅಧ್ಯಯನ' (ಸಂಶೋಧನಾ ಪ್ರಬಂಧ) `ರಾಮಪುರದ ಬಕ್ಕಪ್ಪನವರ ತತ್ವ ಪದಗಳು ಹಾಗೂ ನಿಜ ಶರಣನ ತ್ರಿವಿಧಿಯ ವಚನಗಳು, ೨೦೦೪ರಲ್ಲಿ `ಜನಪದ ಹೊಲಿಗೆ ಮತ್ತು ಚಿತ್ರಕಲೆ' (ಸಂಶೋಧನೆ) ೧೯೯೪ರಲ್ಲಿ `ಶೀಗಿ ಹಾಡುಗಳು’ ೨೦೦೦ರಲ್ಲಿ `ಜನಪದ ಬಯ್ಗಳ ಪದಗಳು’ ಮತ್ತು `ಐವರ ಐವತ್ತು ಕವನಗಳು,’ ೨೦೦೧ರಲ್ಲಿ `ಬಿಸಿಲು ನಾಡಿನ ಹಸಿರು ಬನದಾಗ’ ೨೦೦೨ರಲ್ಲಿ `ನವಚೇತನ’ ೨೦೦೪ರಲ್ಲಿ `ಬೊಬ್ಬಿ ಹಾಡುಗಳು’ ೨೦೦೬ರಲ್ಲಿ `ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣ’ ೨೦೦೭ರಲ್ಲಿ `ಹಂತಿ ಹಾಡುಗಳು’ ಎಂಬ ಕೃತಿಗಳು ಸಂಪಾಸಿದ್ದಾರೆ. ಇವರ `ಶೀಗಿಯ ಹಾಡುಗಳು' ಎಂಬ ಕೃತಿಯು ೨೦೧೨ರಿಂದ ೨೦೧೫ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿತ್ತು.. ಜನಪದ ಸಾಹಿತ್ಯದಲ್ಲಿ ಅಗಾಧ ಸಾಧನೆ ಮಾಡಿದ ಇವರು ಕಮಲಾಪೂರ ತಾಲೂಕಿನ ನಾವದಗಿ ಗ್ರಾಮದಲ್ಲಿ ೧೫ಎಕರೆ ಪ್ರದೇಶದಲ್ಲಿ `ಸಾಂಸ್ಕೃತಿಕ ಲೋಕ' ಎಂಬ ಜನಪದ ಕಲೆ ಸಾಹಿತ್ಯವನ್ನು ಬಿಂಬಿಸುವ ಸಂಸ್ಥೆಯೊAದು ಸ್ಥಾಪಿಸಿ ಕಲ್ಯಾಣ ಕರ್ನಾಟಕದಲ್ಲಿ ಜನಪದ ಲೋಕಕ್ಕೆ ಮಾದರಿಯಾಗಿದ್ದಾರೆ. ಇವರ ಕುರಿತು ಪ್ರೊ.ಜಗನ್ನಾಥ ಕಮಲಾಪೂರೆಯವರು `ಜಾನಪದ ವಿದ್ವಾಂಸ ಡಾ.ರಾಜೇಂದ್ರ ಯರನಾಳೆ' ಎಂಬ ಅಭಿನಂದನಾ ಗ್ರಂಥವು ಹೊರ ತಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ