ಶುಕ್ರವಾರ, ಜನವರಿ 10, 2025
ಪೂಜ್ಯ ಮಹಾದೇವಮ್ಮಾ ತಾಯಿ
ಸಾಹಿತಿಗಳಾದ ಪೂಜ್ಯ ಮಹಾದೇವಮ್ಮಾ ತಾಯಿಯವರು. ಹುಮನಾಬಾದ ತಾಲ್ಲೂಕಿನ ಕಂದಗೂಳ ಗ್ರಾಮದ ಶಾಮರಾವ ಪೋಲಿಸ್ ಪಾಟೀಲ್ ಮತ್ತು ಭಾಗೀರಥಿ ದಂಪತಿಗಳಿಗೆ ೧-೬- ೧೯೬೨ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಟ್ಟಿದ ಒಂದು ವರ್ಷದೊಳಗೆ ಪೋಲಿಯೊ ರೋಗದಿಂದ ಅಂಗವಿಕಲರಾಗಿ ಕಷ್ಟದ ಜೀವನದೊಂದಿಗೆ ಶಿಕ್ಷಣ ಪಡೆದು ೧೯೯೦ರಲ್ಲಿ ಡಾ.ಚನ್ನಬಸವ ಪಟ್ಟದೇವರಿಂದ ಜಂಗಮ ದಿಕ್ಷೇ ಪಡೆದುಕೊಂಡು ೧೯೯೨ ರಲ್ಲಿ ಬಸವಕಲ್ಯಾಣದ ಶೇಷಪ್ಪ ಗಬ್ಬೂರವರಿಂದ ಸಂಗೀತ ಕಲಿತು `ವಿದ್ವತ್' ಪಾಸಾಗಿ ೧೯೯೬ರಲ್ಲಿ ಕಮಲನಗರ ತಾಲ್ಲೂಕಿನ ಖೇಡ-ಸಂಗಮದ ನೀಲಾಂಬಿಕಾ ಆಶ್ರಮದಲ್ಲಿ ಅಂಧ ಮಕ್ಕಳ ಸಂಗೀತ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶರಣ ತತ್ವ ಮತ್ತು ಬಸವಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಧ್ಯಾತ್ಮಿಕತೆಯಿಂದ ಅಕ್ಕ ಮಹಾದೇವಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಜನಕಲ್ಯಾಣ ಟ್ರಸ್ಟ್ (ರಿ) ಅನ್ನು ಸ್ಥಾಪಿಸಿ ಅದರ ಮೂಲಕ ಹೆಣ್ಣು ಮಕ್ಕಳಿಗೆ ಭಜನೆ, ಕೋಲಾಟ, ನಾಟಕ, ರೂಪಕಗಳನ್ನು ಕಲಿಸಿ ಪ್ರೋತ್ಸಾಹಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. `ನಾ ಕಂಡ ಶರಣೆಯರು', `ಅನುಭಾವ ಬುತ್ತಿ’, `ಅಕ್ಕ ಒಲಿದ ಗೀತೆಗಳು', `ಹೃದಯ ಗೀತೆಗಳು', `ಮಮತೆಯ ಮಡಿಲು', `ತಾಯಿ ನೆನಪು', `ಶರಣರ ಪರಿಮಳ', `ಬಸವ ಸಂದೇಶ'. ಇವು ಅವರ ಕೃತಿಗಳಾಗಿವೆ.
೨೦೧೮ರಲ್ಲಿ ಬಾಗಲಕೋಟೆಯಿಂದ `ಕರ್ನಾಟಕ ಅಕಾಡೆಮಿ ಗೌರವ ಪ್ರಶಸ್ತಿ' ಮತ್ತು ಅಕ್ಕಮಹಾದೇವಿ, ಚನ್ನಬಸವ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಔರಾದ ತಾಲೂಕಿನ ಜನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮತ್ತು ಭಾಲ್ಕಿ ತಾಲೂಕಿನ ಜೋಳದಾಬಕಾ ಗ್ರಾಮದಲ್ಲಿ ನಡೆದ ಮಹಿಳಾ ಕದಳಿ ವೇದಿಕೆಯ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ಇವರು ಬರೆದ ಕೆಲ ಹಾಡುಗಳು `ಓ ಚನ್ನಬಸವ', `ಬೆಳ್ಳಿಯ ಬೆಳಗು'. ಎಂಬ ಧ್ವನಿ ಸುರುಳಿಯಾಗಿ ಮುದ್ರಿತಗೊಂಡಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ