ಪುಟಗಳು

ಶುಕ್ರವಾರ, ಜನವರಿ 10, 2025

ಸೂರ್ಯಕಾಂತ ದ್ವಾಸೆ

ಸಾಹಿತಿ ಸೂರ್ಯಕಾಂತ ದ್ವಾಸೆಯವರು ಬೀದರ ಜಿಲ್ಲೆ ಕಮಲನಗರದ ಸಿದ್ರಾಮಪ್ಪಾ ಮತ್ತು ಗಂಗಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿ ಬಿ,ಎಸ್ಸಿ. ಎಂ.ಎ.ಹಿAದಿ.ಬಿ,ಇಡಿ ಪದವಿಧರರಾದ ಇವರು ೧೯೭೬ರಲ್ಲಿ ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಮಲನಗರದ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿದಾಗಲೆ ಮರಾಠಿ, ಹಿಂದಿ ಭಾಷೆಯಲ್ಲಿ ಕವನ, ಲೇಖನಗಳು ಬರೆದು ಲಾತೂರಿನ `ಲೋಕಮತ' ಮರಾಠಿ ಪತ್ರಿಕೆಯಲ್ಲಿ ಹಾಗೂ ಬೀದರದ `ಬೀದರ ಕಿ.ಅವಾಜ' ಎಂಬ ಹಿಂದಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ೨೦೧೦ರಲ್ಲಿ ಭಾಲ್ಕಿ ತಾಲೂಕಿನ ನಾವದಗಿಯ ರೇವಪ್ಪಯ್ಯ ಅಜ್ಜನವರ ಕುರಿತು 'ವಿಶ್ವಗುರು ರೇವಪಯ್ಯಾ' ಎಂಬ ಜೀವನ ಚರಿತ್ರೆಯು ಹಿಂದಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಇವರಿಗೆ ೨೦೧೧ರಲ್ಲಿ ಬೀದರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ