ಶುಕ್ರವಾರ, ಜನವರಿ 10, 2025
ದಿ. ಲೀಲಾ ಮಠಪತಿ
ಕರ್ನಾಟಕ-ಮಹಾರಾಷ್ಟç ಗಡಿನಾಡಿನ ಮರಾಠಿ ಭಾಷಿಕರ ಮಧ್ಯದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳಾ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ ಇವರು ಕಮಲನಗರದಲ್ಲಿ ಶಿಕ್ಷಣ ಸಂಸ್ಥೆಯೊAದನ್ನು ಸ್ಥಾಪಿಸಲು ಕಾರಣಿಭೂತರಾಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾಗಿ ನೂರಾರು ಕಾವ್ಯ ರಚನೆ ಮಾಡಿದ ಕವಯತ್ರಿ ದಿ.ಲೀಲಾ ಮಠಪತಿ. ಇವರು ಹಾವೇರಿ ಜಿಲ್ಲೆಯ ಡೊಂಬರ ಮತ್ತೂರು ಗ್ರಾಮದ ಬಸವರಾಜ ಪಾಟೀಲ್ ಮತ್ತು ಮುರಿಗೆಮ್ಮ ದಂಪತಿಗಳಿಗೆ ದಿನಾಂಕ ೧೧-೫-೧೯೬೦ರಲ್ಲಿ ಜನಿಸಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ.ಬಿ.ಇಡಿ.ಪದವಿಧರರಾದ ಇವರು ಕನ್ನಡದ ಖ್ಯಾತ ಬಂಡಾಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ರವರ ಖಾಸ್ ಸಹೋದರಿಯಾಗಿದ್ದು, ಮತ್ತು ಕಮಲನಗರದ ಜಿ.ಜಿ.ಮಠಪತಿಯವರ ಧರ್ಮಪತ್ನಿ ಹಾಗೂ ಕಮಲನಗರ ಕಸಾಪ ಅಧ್ಯಕ್ಷರಾದ ಪ್ರಶಾಂತ ಮಠಪತಿಯವರ ತಾಯಿಯಾಗಿದ್ದಾರೆ. ಇವರು ಕಮಲನಗರದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಮಹಿಳಾ ಪ್ರೌಢ ಶಾಲಾ ಸ್ಥಾಪನೆಗೆ ಪರಿಕಲ್ಪನೆ ನೀಡಿ ಆ ಶಿಕ್ಷಣ ಸಂಸ್ಥೆಯಲ್ಲಿ ಕೆಲವರ್ಷ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಅಣ್ಣಾ ಡಾ. ಚಂದ್ರಶೇಖರ ಪಾಟೀಲ್ ರವರ ಬಂಡಾಯ ಸಾಹಿತ್ಯಕ್ಕೆ ಮಾರುಹೋಗಿ ನೂರಾರು ಕವಿತೆಗಳು ಬರೆದಿದ್ದು, ಅವು ಓದುಗರ ಮನ ಸೆಳೆಯುವಂತ್ತಿವೆ. ಆದರೆ ದುರಾದೃಷ್ಟ ಇವರು ಆಕಸ್ಮಿಕವಾಗಿ ೧೩-೧೧-೨೦೦೯ರಲ್ಲಿ ನಿಧನ ಹೊಂದಿದ್ದರಿAದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಂತರ ೨೦೧೦ರಲ್ಲಿ ಇವರ ಮಕ್ಕಳು ಅಮ್ಮಳ ಪ್ರೀತಿಯ ನೆನಪಿಗಾಗಿ ಅವರ ಸಮಗ್ರ ಕವಿತೆಗಳು ಒಟ್ಟು ಸೇರಿಸಿ ೨೦೧೦ರಲ್ಲಿ `ಮಿಡಿತ-ತುಡಿತ' ಎಂಬ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ೨೦೦೬ರಲ್ಲಿ ಚಂಪಾ ರವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಸಂಧರ್ಭದಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಮತ್ತು ದೂರದರ್ಶನ ಚಂದನ ವಾಹಿನಿಯವರು ಏರ್ಪಡಿಸಿದ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡಿದ್ದಾರೆ. ಅಷ್ಟೇಯಲ್ಲದೆ ಬೀದರ ಜಿಲ್ಲಾ ಧರಿನಾಡು ಕನ್ನಡ ಸಂಘ ಮತ್ತು ಕಸಾಪದ ಮಹಿಳಾ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ