ಮಂಗಳವಾರ, ಜನವರಿ 14, 2025
ಶಿವಕುಮಾರ ಸ್ವಾಮಿ ಯರಬಾಗ
ಸೃಜನಶೀಲ ಬರಹಗಾರ ಶಿವಕುಮಾರ ಸ್ವಾಮಿ ಯರಬಾಗ ರವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಚನ್ನವಿರಯ್ಯಾ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪತ್ರಿಕೋದ್ಯಮ, ವಾಣಿ ಸರ್ಟಿಫಿಕೇಟ್ ಕೋರ್ಸ್, ಮತ್ತು `ಜ್ಯೋತಿಷ್ಯ ಆಚಾರ್ಯ ಕೋರ್ಸ್' ಅಧ್ಯಯನ ಮಾಡಿದ ಇವರು ೨೦೦೪ರಿಂದ ೨೦೦೮ರ ವರೆಗೆ ಕಲಬುರಗಿ ಆಕಾಶವಾಣಿಯಲ್ಲಿ ನಿರೂಪಕ, ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿ, ೯೩.೫ ರೆಡ್ ಎಫ್.ಎಂ.ನಲ್ಲಿಯು ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದ ಎಲ್.ಐ.ಸಿ. ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬರಹ ರೂಪಕಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೦ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯವರು ಏರ್ಪಡಿಸಿದ ವಿಜ್ಞಾನ ಬರಹ ಶಿಬಿರ, ಮತ್ತು ಕಲಬುರಗಿಯಲ್ಲಿ ಕಸಾಪದವರು ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಚಯಿಸುವ ವ್ಯಾಖ್ಯಾನ ಶಿಬಿರ, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯವರು ಏರ್ಪಡಿಸಿದ ಯುವ ಸಂವಹನ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಸಾಹಿತ್ಯ ರಚನೆಯೊಂದಿಗೆ ವಾಸ್ತು ಶಾಸ್ತ್ರದ ಕುರಿತು ವೈಚಾರಿಕ ಬರಹಗಳು ಬರೆದಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ಹಂತದಲ್ಲಿದ್ದಾರೆ. ಮತ್ತು ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ೨೦೧೨ರಿಂದ ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ನಡೆಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ