ಮಂಗಳವಾರ, ಜನವರಿ 14, 2025
ಕರಬಸಯ್ಯ ಚನ್ನವೀರಯ್ಯ ಸ್ವಾಮಿ
ಹವ್ಯಾಸಿ ಬರಹಗಾರ ಕರಬಸಯ್ಯ ಸಿ. ಸ್ವಾಮಿ. ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಚೆನ್ನವೀರಯ್ಯ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೪-೧೯೭೭ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಕೃಷಿ ಜೀವನದೊಂದಿಗೆ ಕವನ, ತತ್ವಪದ, ಭಜನೆ ಗೀತೆಗಳು ಬರೆದು ಹಾಡುತ್ತಾರೆ.ಮತ್ತು ಅನೇಕ ರಾಜ್ಯ ಮಟ್ಟದ ಜಾನಪದ ಮೇಳ, ಸಮ್ಮೇಳನಗಳಲ್ಲಿ ತಮ್ಮ ಸಾಹಿತ್ಯ ಪ್ರಚುರ ಪಡಿಸಿದ್ದಾರೆ. ಹಾಗೂ ಹುಟ್ಟೂರಿನಲ್ಲಿ ಶ್ರೀ ಚನ್ನಮಲ್ಲೇಶ್ವರ ಭಜನಾ ಸಂಘದ ಮೂಲಕ ತಮ್ಮ ಸಾಹಿತ್ಯ ಪ್ರಸಾರ ಗೈಯುತ್ತಿದ್ದಾರೆ. ಇವರ ತತ್ವಪದ ಹಾಡುಗಳು ಹಾರಕೂಡ ಹಿರೇಮಠ ಸಂಸ್ಥಾನ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ' ಎಂಬ ಪ್ರಾತಿನಿಧಿಕ ಸಂಕಲನ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಏರ್ಪಡಿಸಿದ ಚರ್ಮವಾದ್ಯಗಳ ಸಮಾವೇಶ ಹಾಗೂ ಹಂಪಿ ಉತ್ಸವದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ