ಮಂಗಳವಾರ, ಜನವರಿ 14, 2025
ಮಧುಕರ ಎನ್.ಘೋಡಕೆ
ಕವಿ, ಕಲಾವಿದ ಮಧುಕರ ಎನ್.ಘೋಡಕೆ ರವರು. ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ನರಸಿಂಗರಾವ ಮತ್ತು ಸುಗಂಧಬಾಯಿ ದಂಪತಿಗಳಿಗೆ ದಿನಾಂಕ. ೮-೬-೧೯೭೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ಮತ್ತು ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಕವನ, ತತ್ವಪದ, ಜಾನಪದ, ಭಜನೆ ಗೀತೆಗಳು ಬರೆದು ಸ್ವತಃ ರಾಗ ಸಂಯೋಜನೆಯಲ್ಲಿ ಹಾಡುವ ಇವರು ವಾರ್ತಾ ಇಲಾಖೆಯ ಸರ್ಕಾರಿ ಯೋಜನೆಯ ಕುರಿತು ಬೀದಿ ನಾಟಕ, ರೂಪಕಗಳನ್ನು ರಚಿಸಿ ನೂರಾರು ವೇದಿಕೆಯಲ್ಲಿ ಅವು ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಾಗಿ ಗುರುತಿಸಿಕೊಂಡ್ಡಿದ್ದು, ಬೀದರ ಜಿಲ್ಲಾ ವಿಭಾಗ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯ, ಸಕಾಲ ಮಾಹಿತಿ, ಭಾನಾಮತಿ ನಿರ್ಮೂಲನ ಜನಾಂದೊಲನ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಇತ್ಯಾದಿ ಸರ್ಕಾರಿ ಕಾರ್ಯಕ್ರಮಗಳು ಪಡೆದು, ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಅಷ್ಟೇಯಲ್ಲದೆ ತಾವೆ ಬರೆದ ಹಾಡುಗಳನ್ನು ಹಾಡಿ ಜನಜಾಗೃತಿ ಮೂಡಿಸುತ್ತಾರೆ. .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ