ಪುಟಗಳು

ಮಂಗಳವಾರ, ಜನವರಿ 14, 2025

ದಿ. ಡಾ.ಅಮರನಾಥ ನಾಯಕ

ಸಾಹಿತಿ ಡಾ.ಅಮರನಾಥ ನಾಯಕ ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಮದರಶಾ ಮತ್ತು ತಿಪ್ಪವ್ವಾ ದಂಪತಿಗಳಿಗೆ ದಿನಾಂಕ ೧೫-೩-೧೯೬೨ರಲ್ಲಿ ಜನಿಸಿದರು. ಬಿ.ಎಸ್ಸಿ. ಬಿ.ಇ.ಎಂ.ಎಸ್. ಪದವಿ ಪಡೆದು ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿ, ದಿನಾಂಕ ೨೮-೧೦-೨೦೨೦ರಲ್ಲಿ ನಿಧನರಾಗಿದ್ದಾರೆ. ತತ್ವಪದ, ಜಾನಪದ, ಮೊಹರಮ್ ಪದ, ಭಜನೆ ಗೀತೆ, ಹಂತಿ ಹಾಡುಗಳು ಪರಿಚಿತರಾದವರು. ಇವರು ೧೯೯೩ರಿಂದ ೧೯೯೭ರ ವರೆಗೆ ಕೊಹಿನೂರು ಗ್ರಾಂ.ಪA. ಅಧ್ಯಕ್ಷರಾಗಿ, ೨೦೦೦ರಿಂದ ೨೦೦೫ರ ವರೆಗೆ ತಾ. ಪಂ. ಸದಸ್ಯರಾಗಿ, ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ'ಎಂಬ ಪ್ರಾತಿನಿಧಿಕ ಸಂಕಲನದಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ