ಶುಕ್ರವಾರ, ಜನವರಿ 10, 2025
ಬಸವಪ್ರಕಾಶ ಬಿ.ಕೊಡಂಬಲ್
ಉದಯೋನ್ಮುಖ ಬರಹಗಾರ ಬಸವಪ್ರಕಾಶ ಬಿ.ಕೊಡಂಬಲ್ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಬೇಮಳಖೇಡ ಗ್ರಾಮದ ಭದ್ರಶೆಟ್ಟಿ ಮತ್ತು ಮಾಯಾದೇವಿ ದಂಪತಿಗಳಿಗೆ ದಿನಾಂಕ ೨೧-೧೦-೧೯೯೫ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಎಡ್.ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿ ಇರುವುದರಿಂದ ಕತೆ, ಕವನ, ಚುಟುಕು, ಹನಿಗವನ, ಲೇಖನ ಮೊದಲಾದವು ರಚಸಿ `ಸಮರಸದ ಅಲೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಚಿಂಚೊಳಿಯ ಕಸಾಪ ಮತ್ತು ನೈಜದೀಪ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ `ಪ್ರಶಸ್ತಿ ಪತ್ರ' ನೀಡಿ ಗೌರವಿಸಿದ್ದಾರೆ. ಇವರು ಬರೆದ ಕವನ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ