ಪುಟಗಳು

ಶುಕ್ರವಾರ, ಜನವರಿ 10, 2025

ಮೊಹಮ್ಮದ್ ತೈಯಬ್

ಬಹುಭಾಷಾ ಕವಿ ಮೊಹಮ್ಮದ್ ತೈಯಬ್ ರವರ ಮಾತೃಭಾಷೆ ಉರ್ದುವಾದರು ಕನ್ನಡದಲ್ಲಿ ಬರೆಯುತ್ತಾರೆ. ಇವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಬೇಮಳಖೇಡ ಗ್ರಾಮದ ಎಕ್ಬಾಲಮಿಯ್ಯ ಮತ್ತು ನಸೀಮಾ ಬೇಗಂ ದಂಪತಿಗೆ ದಿನಾಂಕ ೪-೬-೧೯೮೯ರಲ್ಲಿ ಜನಿಸಿದ್ದಾರೆ. ಡಿ.ಎಡ್,ಎಂ.ಎ (ಹಿಂದಿ),ಎA.ಎ (ಇತಿಹಾಸ) ಪದವಿ ಪಡೆದು ಕೆಲಕಾಲ ಪೊಲೀಸ್ ಹುದ್ದೆ ನಿರ್ವಸಿ ಸದ್ಯ ಕಲಬುರ್ಗಿಯ ತೋಟಗಾರಿಕೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರು ಕನ್ನಡದಲ್ಲಿ `ಭೀಮಗಿರಿ', `ನವ ಚೈತ್ರ', `ಹದ್ದಿನ ಗೂಡು'. (ಕವನ ಸಂಕಲನಗಳು) `ಜನ್ಮ ಕೊಡು ತಾಯಿ' (ಕಥಾಸಂಕಲನ) `ಪರೋಪಕಾರ' `ದಿ ಹೀರೋ ಜಾಕ್ಲೇನ್ ಭಾಗ- ೧ `ಭೂತಗಳ ಹಡಗು' `ಕುತಂತ್ರ' (ಮಕ್ಕಳ ಕಥಾ ಸಂಕಲನಗಳು) ಹಿಂದಿಯಲ್ಲಿ `ಮಾನವತಾ ಕೀ ಖೋಜ್ ಮೇ' (ಕವನ ಸಂಕಲನ) ಉರ್ದುವಿನಲ್ಲಿ ಬೀದರನ ಪ್ರಮುಖ ಉರ್ದು ಸಾಹಿತಿಗಳ 'ಗಜಲ್' ಗಳನ್ನು ಕನ್ನಡಕ್ಕೆ ಲಿಪ್ಯಾಂತರಗೊಳಿಸಿ `ಮೀರ್ ನ ಗಜಲ್ ಗಳು' ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಇವರ ಮಕ್ಕಳ ಕತೆ ಮಯೂರ ಮಾಸಪತ್ರಿಕೆ ಸೇರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೨೦೧೬ರಲ್ಲಿ ದೂರದರ್ಶನ ಚಂದನ ವಾಹಿನಿಯ `ಬೆಳಗು’ ಕಾರ್ಯಕ್ರಮದಲ್ಲಿ ಇವರ ಸಂದರ್ಶನವು ಪ್ರಸಾರವಾಗಿದೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ