ಪುಟಗಳು

ಶುಕ್ರವಾರ, ಜನವರಿ 10, 2025

ಡಾ. ಗೌತಮ್ಮ ಬಕ್ಕಪ್ಪ

ಯುವ ಕವಿ ಡಾ.ಗೌತಮ ಬಕ್ಕಪ್ಪ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಬಕ್ಕಪ್ಪ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೩-೧೯೮೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪಿ.ಜಿ.ಡಿಪ್ಲೊಮಾ, ಪಿ.ಎಚ್ ಡಿ..ಪದವಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ವಾರ್ಡನ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ, ಆಧುನಿಕ ವಚನ, ಲೇಖನಗಳನ್ನು ಬರೆದು `ದಲಿತ ತತ್ವಗಳ ಚಿಂತನೆ' ಮತ್ತು `ಶಿಕ್ಷಣ, ಸಂಘಟನೆ, ಹೋರಾಟದ ಗಜಲ್‌ಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ದಲಿತ ಬಂಡಾಯ ಕತೆಗಳಲ್ಲಿ ಭಾಷೆ ಮತ್ತು ಸಂಸ್ಕೃತಿ' ಎಂಬುದು ಇವರ ಸಂಶೋಧನಾ ಗ್ರಂಥವಾಗಿದೆ. `ಶ್ರೀಗುರು ಗಂಗಾಧರ ಬಕ್ಕಪ್ರಭು' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ರಚಿಸಿದ ಇವರು ೨೦ಕಿಂತ ಹೆಚ್ಚು ನಾಟಕಗಳಲ್ಲಿ ನಟಿಸಿ ಜಾನಪದ ಸಂಗೀತ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಇವರಿಗೆ ಹಾರಕೂಡ ಮಠದಿಂದ `ಕಲ್ಯಾಣ ಚನ್ನಶ್ರೀ' ಹಾಗೂ `ಸಿದ್ಧಾರ್ಥ' `ಧರಿಸಿರಿ' `ಕಾವ್ಯ ರತ್ನಾಂಜಲಿ' `ಕನ್ನಡ ರತ್ನ' `ಸಾವಿತ್ರಿ ಬಾಯಿ ಪುಲೆ' `ಸಾಹಿತ್ಯ ರತ್ನ' `ಕನಕ ಶ್ರೀ' `ಕನ್ನಡ ಸೇವಾ ರತ್ನ' ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಇವರ ಬರೆಹಗಳು ಸುಧಾ, ಭೀಮವಾದ, ಸ್ಥಿತಿಗತಿ, ಪ್ರಜಾವಾಣಿ, ಸಂಜೆವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದ ತಾಲೂಕಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ