ಪುಟಗಳು

ಶುಕ್ರವಾರ, ಜನವರಿ 10, 2025

ದಿ.ಕಾಶಿನಾಥ ಪಂಚಶೀಲ ಗವಾಯಿ

ಹಿರಿಯ ಸಾಹಿತಿ ದಿ.ಕಾಶಿನಾಥ ಪಂಚಶೀಲ ಗವಾಯಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಿಲಾಲ್‌ಪುರ ಗ್ರಾಮದ ಕಾಳಪ್ಪ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೪-೪-೧೯೩೩ರಲ್ಲಿ ಜ£ಸಿದ್ದಾರೆ. ತನ್ನ ತಾಯಿ ತವರೂರಾದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಅಧ್ಯಯನ ಮಾಡುವಾಗಲೇ ಅಂದಿನ ಮಹಾಮಾರಿ ಸಿಡುಬು ರೋಗಕ್ಕೆ ತುತ್ತಾಗಿ ಎರಡೂ ಕಣ್ಣುಗಳು ಕಳೆದುಕೊಂಡ ದುರಾದೃಷ್ಟರು. ಆಗ ಅವರಿಗೆ ಶಿಕ್ಷಣ ಮುಂದಿವರೆಸಲು ಆಗದೆ ತಮ್ಮ ತಂದೆಯೊAದಿಗೆ ಹುಟ್ಟೂರಾದ ಹಿಲಾಲಪುರಕ್ಕೆ ಬಂದು, ಗ್ರಾಮದಲ್ಲಿ ಊರ ಗೌಡರು, ಸಾಹುಕಾರರ ದನ ಕಾಯುವ ವೃತ್ತಿಯಲ್ಲಿ ತೊಡಗಿಕೊಂಡು ಬಾಲ್ಯ ಜೀವನ ಶೋಚನಿಯವಾಗಿ ಕಳೆದರು. ಆದರೂ ಕಲೆ ಸಾಹಿತ್ಯ ಸಂಗೀತದಲ್ಲಿ ಆಸಕ್ತರಾದ ಇವರು ಗದುಗಿನ ಭೀಮರಾಯ ಮಾಸ್ತರರಿಂದ ಸಂಗೀತ ಪಾಠ ಕಲಿತು ಮುಂದೆ ಹಳ್ಳಿಗಳಲ್ಲಿ ಊರೂರು ತಿರುಗಿ ತಮ್ಮ ಹಾಡುಗಳನ್ನು ಹಾಡಿ ಜನಮನ ರಂಜಿಸುತ್ತ ಬದುಕು ಕಟ್ಟಿಕೊಂಡವರು. ಭಜನೆ,ತತ್ವಪದ, ಗೀಗೀ ಪದ, ಹಂತಿ ಹಾಡು, ಮೋಹರಂ ಪದ ಸೇರಿದಂತೆ ಮೊದಲಾದವು ಬರೆದು ರಾಗಸಂಯೋಜನೆಯೊAದಿಗೆ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ‘ಲವ-ಕುಶ’ ಎಂಬ ನಾಟಕವನ್ನು ರಚಿಸಿ, ಅಲ್ಲಲ್ಲಿ ಜಾತ್ರೆ ಮತ್ತಿತರ ಕಡೆಗಳಲ್ಲಿ ನಿರ್ದೇಶನ ಮಾಡಿದ್ದಾರೆ. ಅದಾದ ನಂತರ ಬೀದರಕ್ಕೆ ಬಂದು ಶ್ರೀ ಮಾಣಿಕರಾವ ಜ್ಯೋತಿಯವರ ಪ್ರೇರಣೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗೌತಮ ಬುದ್ಧರ ಹಾಡುಗಳನ್ನು ಬರೆದು ಮೂಢನಂಬಿಕೆಗಳ ವಿರುದ್ಧ ಬಂಡಾಯದ ಕ್ರಾಂತಿ ಗೀತೆಗಳು ಹಾಡಲು ಸುರು ಮಾಡಿ ಬೀದರ, ಕಲಬುರಗಿ, ಆಂಧ್ರ, ತೆಲಂಗಾಣ, ಮಹಾರಾಷ್ಟçಗಳಲ್ಲಿ ಕವಿ, ಗಾಯಕರಾಗಿ ಖ್ಯಾತಿಯನ್ನು ಪಡೆದಿದ್ದಾರೆ. ನಾಗಪುರದಲ್ಲಿ ಬೌದ್ಧ ದೀಕ್ಷೆಯನ್ನು ಪಡೆದು ಪಂಚಶೀಲ ಎಂಬ ಬಿರುದಿಗೆ ಪಾತ್ರರಾಗಿ ಮುಂದೆ ಬರು ಬರುತಾ ‘ಕಾಶಿನಾಥ ಗವಾಯಿ’ ಹೋಗಿ ಪಂಚಶೀಲ ಕಾಶಿನಾಥ ಗವಾಯಿಯಾದರು. ಜೀವನದಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡರು ಎದೆಗುಂದದೆ ಸಾಹಿತ್ಯ ರಚನೆ ಮತ್ತು ಹಾಡುಗಾರಿಕೆಯಲ್ಲಿ ತೋಡಗಿ ಜೀವನಪೂರ್ತಿ ಕವಿ, ಪಂಚಶೀಲ ಕಾಶಿನಾಥ ಗವಾಯಿ, ಎಂದೇ ಖ್ಯಾತರಾಗಿದ್ದಾರೆ. ಇವರು ಬರೆದ ಹಾಡುಗಳನ್ನು ೧೯೫೪ರಲ್ಲಿ ‘ಬುದ್ಧ ವಚನಾಮೃತ’ ಮತ್ತು ೧೯೬೪ರಲ್ಲಿ ‘ಬುದ್ಧ, ಬಸವ, ಅಂಬೇಡ್ಕರ್’ ಎಂಬ ಎರಡು ಕವನ ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಈಗಲೂ ಇವರ ಈ ಹಾಡುಗಳು ಬೀದರ, ಕಲಬುರಗಿ, ಯಾದಗಿರಿ, ಜಿಲ್ಲೆಯಾದ್ಯಂತ ಗ್ರಾಮೀಣ ಜನರ ಭಜನೆ ಮೋಹರಂ ಮತ್ತಿತರ ಕಡೆಗಳಲ್ಲಿ ಹಾಡುತ್ತಾರೆ. ಗವಾಯಿ ಹಾಡುಗಳು ಎಂದರೆ ಗ್ರಾಮೀಣ ಜನರಿಗೆ ಅದೆಂಥದೋ ನಾಡಿಮಿಡಿತ. ತತ್ವ ಪದ, ಜವಾಲ್- ಜವಾಬ್ ಗೀಗೀ ಪದಗಳ ರಚನೆಯಲ್ಲಿ ಅವರದು ಎತ್ತಿದ ಕೈ. ಉತ್ತಮ ಕಂಠಸಿರಿಯನ್ನು ಹೊಂದಿದ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಕಂಡು ರಾಜ್ಯ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಫೀಲೊಶಿಫ್ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ದಲಿತ ಕವಿ ಮಾಣಿಕರಾವ ಜ್ಯೋತಿಯವರನ್ನು ತಮ್ಮ ಗುರುಗಳೆಂದು ನಂಬಿದರು. ಆದರೆ ದಿನಾಂಕ ೬-೪-೨೦೦೬ರಲ್ಲಿ ಇಹಲೋಕ ತ್ಯಜಿಸಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ