ಮಂಗಳವಾರ, ಜನವರಿ 14, 2025
ವೀರಭದ್ರಪ್ಪ ಉಪ್ಪಿನ
ಕವಿ, ಕಲಾವಿದ, ನಾಟಕಕಾರಾದ ವೀರಭದ್ರಪ್ಪ ಉಪ್ಪಿನ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಶರಣಪ್ಪ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರದ ಕರ್ನಾಟಕ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ, ಕಛೇರಿಯ ಅಧಿಕ್ಷಕರಾಗಿ, ಮತ್ತು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಹಣಕಾಸು ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತರಾಗಿ ಬೆಳೆದಂತೆ ಪದ್ಯಗಳನ್ನು ಬರೆದು ರಾಗಬದ್ದವಾಗಿ ಹಾಡುವುದು ಹಾಗೂ ಭಾಷಣ, ಲೇಖನ ಪ್ರಬಂಧಗಳನ್ನು ಬರೆದು ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ೨೦೨೦ ರಲ್ಲಿ ಕೋರಾನ ಮಹಾಮಾರಿಯ ಕನ್ನಡ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ವಿಜಯಕರ್ನಾಕ,ವಿಜಯವಾಣಿ,ಕನ್ನಡ ಪ್ರಭ,ಉದಯವಾಣಿ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ `ಕರೋನಾ ಯಮರ್ಜೆನ್ಸಿ ಕೋವಿಡ್-೧೯’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ೧೯೯೦ರಿಂದ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳು ಬರೆದಿದ್ದಾರೆ. ಮತ್ತು ಕಲಬುರಗಿ ಆಕಾಶವಾಣಿಯಿಂದ ಇವರ ಚಿಂತನ, ವೈಚಾರಿಕ ಭಾಷಣ ಬರಹಗಳು ಕೂಡ ಪ್ರಸಾರಗೊಂಡಿವೆ. ಮತ್ತು `ಸಿಂಹಾಸನ ಖಾಲಿ ಇದೆ, ಜಲ, ಯಮನ ದರ್ಬಾರ್' ಎಂಬ ನಾಟಕಗಳಲ್ಲಿಯು ನಟಿಸಿದ್ದಾರೆ. ಅಷ್ಟೇಯಲ್ಲದೆ ೧೯೮೯ ಮತ್ತು ೧೯೯೨ರಲ್ಲಿ ಬೀದರದ ರಂಗ ಮಂದಿರದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಉಷಾ ಮಂಗೇಶ್ಕರ್ ರವರಿಂದ ರಸಮಂಜರಿ ಕಾರ್ಯಕ್ರಮವು ಆಯೋಜಿಸಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ