ಪುಟಗಳು

ಮಂಗಳವಾರ, ಜನವರಿ 14, 2025

ಸಿದ್ರಾಮ ಪಂಡಿತಜಿ

ನಿಜಾಮನ ವಿರುದ್ಧ ಬಂಡಾಯದ ಗೀತೆ ಹಾಡಿದ ಕವಿಯೆಂದರೆ ಸಿದ್ರಾಮ ಪಂಡಿತಜಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯ ಲಾಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ೧೯೧೦ರಲ್ಲಿ ಜನಿಸಿದ್ದಾರೆ. ಮೋಡಿ, ಬಾಲಬೇಧ ಮತ್ತು ಹಿಂದಿ ಭಾಷೆ ಅರಿತುಕೊಂಡಿದ್ದರೆAದು ಮತ್ತು ಹಾರ್ಮೋನಿಯಂ ವಾದಕರಾಗಿದ್ದರೆಂದು ತಿಳಿದುಬಂದಿದೆ. ಇವರ ವಿದ್ಯಾರ್ಹತೆ ,ವೃತ್ತಿ, ತಿಳಿದು ಬಂದಿರುವುದಿಲ್ಲ. ಇವರು ನಿಜಾಮರ ವಿರುದ್ಧದ ದಂಗೆಯಲ್ಲಿಯು ಭಾಗವಹಿಸಿದ ಬಂಡಾಯ ಕವಿ ಹೋರಾಟಗಾರರಾಗಿದ್ದು ಇವರ ನಿಧನದ ಬಗ್ಗೆಯೂ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ