ಪುಟಗಳು

ಭಾನುವಾರ, ಜನವರಿ 12, 2025

ಮಾಣಿಕರಾವ ಬಿರಾದಾರ

`ಚನ್ನ ಕಿರಣ' ಎಂಬ ಅಂಕಿತನಾಮದಿAದ ಹೊರನಾಡಿನಲ್ಲಿದ್ದು ಸಾಹಿತ್ಯ ರಚಿಸುತ್ತಿರುವ ಹಿರಿಯ ಸಾಹಿತಿ ಮಾಣಿಕರಾವ ಬಿರಾದಾರ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಿರಿ (ಬಿ) ಗ್ರಾಮದ ಶರಣಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೧-೧-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪದವಿ ಪಡೆದು ಮಹಾರಾಷ್ಟ್ರ ಲಾತೂರ್ ಜಿಲ್ಲೆ ಉದಗಿರದ ಮಹಾರಾಷ್ಟ್ರ ಉದಯಗಿರಿ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಹಾರಾಷ್ಟ್ರದಲ್ಲಿ ಸೇವೆಗೆ ಸೇರಿ ಮರಾಠಿ ಭಾಷೆ ಕಲಿತು ಶರಣರ ಮತ್ತು ಸರ್ವಜ್ಞನ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ ಇವರ ಕೃತಿಗಳೆಂದರೆ, `ಚನ್ನಬಸವನ ಕರಣ ಹಾಸಿಗೆ' (ಅಧ್ಯಾತ್ಮೀಕ) `ಹಾವಗಿ ಸ್ವಾಮಿ ಚರಿತ್ರೆ' `ಶಿವದಾಸ ಮುತ್ಯಾನ ಚರಿತ್ರೆ ' (ಚರಿತ್ರೆಗಳು) `ಮಹಾರಾಷ್ಟ್ರ ಗಡಿಯ ಕನ್ನಡ ಜಾನಪದ ಗೀತೆಗಳು' `ಮಹಾರಾಷ್ಟ್ರ ಗಡಿಯ ಭಕ್ತಿ ಗೀತೆಗಳು' (ಸಂಪಾದನೆ) `ಕುವೆಂಪು ವಿಶ್ವಮಾನವ ಸಂದೇಶ', `ವಚನ ಸಂಗಮ', ಸರ್ವಜ್ಞನ ೫೦೦ ವಚನಗಳು (ಮರಾಠಿಗೆ ಅನುವಾದ) `ವಚನ ವಿಚಾರ ವಾಹಿನಿ' (ಮರಾಠಿ ಕೃತಿ) ಮತ್ತು `ಬಿಡುಗಡೆ', `ವ್ಯಸನ ಮುಕ್ತಿ', `ವಧುದಕ್ಷಿಣೆ', `ಮುಕ್ತಿ', `ಶರಣು ಶರಣಾರ್ಥಿ', `ಮಿಸಲು ಮುಕ್ತಿ', `ಅತ್ತೆ-ಸೊಸೆ ದರ್ಪ', `ಒಗ್ಗಟ್ಟು', `ಭಾವೈಕ್ಯತೆ', `ಶಿವಶರಣ ನನ್ನಯ್ಯಾ', `ಸುಂಕಕAಜಿ ನಡೆದೇನು', `ಅಪಹರಣ'. ಇವು ಅವರ ೧೨ ಏಕಾಂಕ ನಾಟಕಗಳಾಗಿವೆ ಇವರ ಬರಹಗಳು ಕನ್ನಡ, ಮರಾಠಿ ಪ್ರಮುಖ ಪತ್ರಕೆಗಳಲ್ಲಿ ಪ್ರಕಟವಾಗಿವೆ. ಇವರು ಕೆಲ ಕಾಲ `ಉದಯ ಕೆಸರಿ ಘರ್ಜನೆ, ಪ್ರಭೆ, ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಮಹಾರಾಷ್ಟçದಲ್ಲಿ ಹಲವು ಕನ್ನಡ ಪರ ಸಂಘಟನೆಗಳನ್ನು ಕಟ್ಟಿ ಬೆಳರೆಸಿದ್ದಾರೆ. ಇವರು ೧೯೭೮ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬಸವಕಲ್ಯಾಣ ಸಸ್ತಾಪೂರದ ೫ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ, ಸದ್ಯ ಇವರು ಮಹಾರಾಷ್ಟç ಉದಗಿರದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ