ಪುಟಗಳು

ಭಾನುವಾರ, ಜನವರಿ 12, 2025

ಡಾ.ತಾತ್ಯೆರಾವ ಕಾಂಬಳೆ

ಹಿರಿಯ ಸಾಹಿತಿ ಡಾ.ತಾತ್ಯೆರಾವ ಕಾಂಬಳೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಮಸಾಜಿ ಕಾಂಬಳೆ ಮತ್ತು ಮಾಲನಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೪೦ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಬಿ.ಎ. ಎಲ್.ಎಲ್.ಬಿ.ಪದವಿ ಪಡೆದು ವಕೀಲರಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು ಪಂಚ ಭಾಷಾ ಪ್ರವೀಣರಾದ ಇವರು ಕ್ರಾಂತಿಕಾರಿ ಭಾಷಣಕಾರರಾಗಿದ್ದಾರೆ. ಡಾ.ಅಂಬೇಡ್ಕರ್ ಸ್ಥಾಪಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ `ಭಾರತ ಭಾಗ್ಯ ವಿಧಾತ ಡಾ. ಬಿ.ಆರ್.ಅಂಬೇಡ್ಕರ್’ (ಚರಿತ್ರೆ) `ಯುದ್ದ ಬನಾಮ್ ಬುದ್ಧ’, `ಯುಗ ಪರಿವರ್ತಕ ಡಾ.ಅಂಬೇಡ್ಕರ್’, `ಹೂ ಇಜ್ ಹಿಂದು?’ ಎಂಬ ಕೃತಿಗಳು ಹಿಂದಿ ಭಾಷೆಯಲ್ಲಿ, `ಚೌನಿ’ ಎಂಬ ಕಥಾ ಸಂಕಲನ ಮರಾಠಿಯಲ್ಲಿ ಬರೆದಿದ್ದಾರೆ. `ಭಾರತ ಭಾಗ್ಯ ವಿಧಾತ ಡಾ.ಬಿ.ಆರ್.ಅಂಬೇಡ್ಕರ್ ’ ಇದು ಕನ್ನಡಕ್ಕೆ ಅನುವಾದಗೊಂಡಿದೆ. ೧೯೭೦ರಲ್ಲಿ ಡಾ. ಅಂಬೇಡ್ಕರ್ ಅವರ ಮಗ ಯಶ್ವಂತರಾವ ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಭಾರತದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರಿಗೆ ೧೯೯೦ರಲ್ಲಿ ಮೀರಾ ತಾಯಿ ಅಂಬೇಡ್ಕರ್ ರವರು ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ಭಾರತದ ಲಿಗಲ್ ಅಡ್ವಿಕೇಟ್ ಆಗಿಯು ನೇಮಕ ಮಾಡಿದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೬೪ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಔರಂಗಾಬಾದನಲ್ಲಿ ಅಂಬೇಡ್ಕರ ಸ್ಥಾಪಿತ ಮಿಲಿಂದ ಕಾಲೇಜ್ ನಿಂದ `ಮಿಸ್ಟರ್ ಮಿಲಿಂದ ಪ್ರಶಸ್ತಿ, ೧೯೯೩ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ರಾಷ್ಟ್ರೀಯ ಸೇವಾ ಪ್ರಶಸ್ತಿ, ೨೦೦೭ರಲ್ಲಿ ಹುಬ್ಬಳ್ಳಿ-ಧಾರವಾಡ ಬೌದ್ಧ ಮಹಾಸಭಾದಿಂದ `ಅಂಬೇಡ್ಕರ್ ಪ್ರಶಸ್ತಿ, ೨೦೧೧ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ೨೦೧೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೪ರಲ್ಲಿ ಭಗವಾನ್ ಬುದ್ಧ ಅಂತರಾಷ್ಟ್ರೀಯ ಫೀಲೋಸಿಫ್ ಅವಾರ್ಡ, ೨೦೧೭ರಲ್ಲಿ ಬೆಂಗಳೂರಿನ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯು ಲಭಿಸಿದೆ. ಇವರು ೧೯೬೭ ಮತ್ತು ೧೯೯೬ರಲ್ಲಿ ಬೀದರ ಲೋಕಸಭಾ, ೧೯೭೮ರಲ್ಲಿ ಹುಲಸೂರು ವಿಧಾನ ಸಭಾ, ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವ ಗೊಂಡಿದ್ದು ಬೆಸರದ ಸಂಗತಿಯಾಗಿದೆ. ಸದ್ಯ ಇವರು ಹೆಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜ ಸೇವಕರಾಗಿ, ಶಿಕ್ಷಣ ಪ್ರೇಮಿ, ಸಾಹಿತಿಯಾಗಿ ಹೈದರಾಬಾದನಲ್ಲಿ ನೆಲೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ