ಭಾನುವಾರ, ಜನವರಿ 12, 2025
ಡಾ.ಮಲ್ಲಿಕಾರ್ಜುನ ಎ. ಭಂಡೆ
ಸಾಹಿತಿ ಡಾ.ಮಲ್ಲಿಕಾರ್ಜುನ ಎ.ಭಂಡೆ ರವರು ಬೀದರ ಜಿ¯್ಲೆ ಕಮಲನಗರ ತಾಲೂಕಿನ ರಂಡ್ಯಾಳ ಗ್ರಾಮದ ಅಣ್ಣಾರಾವ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧೦-೬-೧೯೫೧ರಲ್ಲಿ ಜನಿಸಿದ್ದಾರೆ. ಎಂ.ಬಿ.ಬಿ.ಎಸ್.ಪದವಿಧರರಾದ ಇವರು ೧೯೭೯ರಲ್ಲಿ ಮಹಾರಾಷ್ಟçದ ಉದಗಿರದಲ್ಲಿ ‘ಚಿರಾಯು ಕ್ಲಿನಿಕ’ ಎಂಬ ಹೆಸರಿನ ಸ್ವಂತ ಖಾಸಗಿ ದವಾಖಾನೆಯೊಂದು ತೆರೆದು ಉದಗಿರ ನಗರದಲ್ಲಿಯೆ ನೆಲೆಸಿ, ೪೧ ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಮಹಾರಾಷ್ಟçದ ಖಾಯಂ ನಿವಾಸಿಯಾಗಿ ಕನ್ನಡ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರು ‘ಶ್ರೀ ಗುರು ಚನ್ನಮಲ್ಲೇಶ್ವರ ಇತಿಹಾಸ’ ಎಂಬ ಚರಿತ್ರೆಯನ್ನು ಮತ್ತು ‘ನನ್ನ ಅನುಭಾವದ ವಚನಗಳು’ ಎಂಬ ಕೃತಿಗಳು ರಚಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿಯಿಂದ ಸಾಹಿತ್ಯ ರಚಿಸುತ್ತಿರುವ ಇವರದು ತುಂಬ ಹೆಮ್ಮೆ ಪಡುವ ವಿಷಯವಾಗಿದೆ. ‘ಮರಾಠಿ’ ಜನ ಸಮುದಾಯದ ನಡುವೆ ವೈಧ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮಿಕ ಆಧುನಿಕ ವಚನಗಳು ತುಂಬ ಬರೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ