ಶುಕ್ರವಾರ, ಜನವರಿ 10, 2025
ಸುಬ್ಬಣ್ಣ ಕರಕನಳ್ಳಿ
ದಲಿತ ಬಂಡಾಯ ಸಾಹಿತಿ ಸುಬ್ಬಣ್ಣ ಕರಕನಳ್ಳಿ.ಯವರು ಬೀದರ ಜಿಲ್ಲೆಂ ಚಿಟಗುಪ್ಪ ತಾಲೂಕಿನ ಕರಕನಳ್ಳಿ ಗ್ರಾಮದ ಶಿವಪ್ಪ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೫-೬-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಎA.ಫೀಲ್ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಾ ಬರವಣಿಗೆಯಲ್ಲಿ ತೊಡಗಿ `ಬುದ್ಧ ಬಸವ ಅಂಬೇಡ್ಕರ್ ಬೆಳಕು’, `ರಾಷ್ಟ್ರ ಪ್ರೇಮ’, `ಅಮ್ಮನ ಹರಕೆ'. (ಕವನ ಸಂಕಲನಗಳು) `ಸಮಾನತೆಗಾಗಿ ಸಂಘರ್ಷ’ (ಸಂಶೋಧನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ಬೀದರದ ಕಸಾಪ, ಧರಿನಾಡು ಕನ್ನಡ ಸಂಘ, ದೇಶಪಾಂಡೆ ಪ್ರತಿಷ್ಠಾನ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಜನಸೇವಾ ಸಂಸ್ಥೆ, ಅಂಬಿಗರ ಚೌಡಯ್ಯ ಯುವ ಸೈನ್ಯ ಮೊದಲಾದವರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ವಿಶ್ವ ಕನ್ನಡಿಗರ ಸಂಸ್ಥೆಯನ್ನು ಸ್ಥಾಪಿಸಿ ಅದರ ರಾಜ್ಯಾಧ್ಯಕ್ಷರಾಗಿ, ಬೀದರದ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ, ವೀರ ಕನ್ನಡಿಗರ ಸೈನ್ಯದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ