ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ಹಣಮಂತ ಮೇಲಕೇರಿ

ಸಾಹಿತಿ ಡಾ.ಹಣಮಂತ ಮೇಲಕೇರಿ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮದರಗಿ ಗ್ರಾಮದ ಭೀಮಣ್ಣಾ ಮತ್ತು ಮಾಳಮ್ಮಾ ದಂಪತಿಗಳಿಗೆ ದಿನಾಂಕ ೧೫-೭-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫಿಲ್. ಪಿ.ಜಿ.ಡಿಪ್ಲೊಮಾ, ಪಿ.ಎಚ್.ಡಿ.ಪದವಿ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೦ರಲ್ಲಿ `ಸೃಜನಶೀಲ ಸಾಹಿತಿ ಭಾಲಚಂದ್ರ ಜಯಶೆಟ್ಟಿ’ (ವ್ಯಕ್ತಿಚಿತ್ರಣ) ೨೦೧೪ರಲ್ಲಿ `ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಆಧುನಿಕ ವಚನಕಾರರು' ೨೦೧೮ರಲ್ಲಿ `ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ' ಮತ್ತು `ಕಲಬುರಗಿ ಜಿಲ್ಲಾ ಆಧುನಿಕ ವಚನಕಾರರು' ೨೦೧೯ರಲ್ಲಿ `ಬೀದರ ಜಿಲ್ಲೆಯ ಜನಪದ ಕಲಾ ಪ್ರಕಾರಗಳು ಹಾಗೂ ಅವುಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಕೃತಿಗಳು ಪ್ರಕಟಿಸಿ ೨೦೧೮ರಲ್ಲಿ `ಡಾ.ಎಸ್.ಎಸ್.ಅಂಗಡಿ' `ಕನ್ನಡ ದಲಿತ ಸಾಹಿತ್ಯ ಸಂಪುಟ-೪' 'ಸಿದ್ದೇಶ್ವರ ಸ್ವಾಮಿಜಿಯವರ ಅಮೃತವಾಣಿ' ಎಂಬ ಕೃತಿಗಳು ಸಂಪಾಸಿದ್ದಾರೆ. ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜೋತ್ಸವ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿ, ಜಗಜ್ಯೋತಿ ಕಾಯಕಶ್ರೀ ಪ್ರಶಸ್ತಿ, ರಾಷ್ಟ್ರೀಯ ಜ್ಞಾನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಇವರ ಲೇಖನ ಬರಹಗಳು ದಾಸೋಹ ರತ್ನ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ