ಪುಟಗಳು

ಶುಕ್ರವಾರ, ಜನವರಿ 10, 2025

ಮಾಣಿಕ ನೇಳಗಿ ತಾಳಮಡಗಿ

ಸಾಹಿತಿ ಮಾಣಿಕ ನೇಳಗಿಯವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಕಲ್ಲಪ್ಪಾ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೨೨-೦೭-೧೯೭೦ರಂದು ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೯ರಲ್ಲಿ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಗದಗ ಜಿಲ್ಲೆಯ ಮುಂಡರಗಿಯಲ್ಲಿ ಸೇವೆಗೆ ಸೇರಿ ಸದ್ಯ ಔರಾದ (ಬಿ) ತಾಲೂಕಿನ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ಕತೆ, ಕವನ, ಲೇಖನ ಬರೆಯುವತ್ತಾ ಅಂದಿನ ದಿನಗಳಲ್ಲಿ ರಾಜ್ಯ ಮಟ್ಟದ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಕವನ ಲೇಖನಗಳನ್ನು ಪ್ರಕಟಿಸಿ ಕವಿ ಸಾಹಿತಿಯಾಗಿ ಹೆಸರುವಾಸಿಯಾದವರು. ಅಷ್ಟೇಯಲ್ಲದೆ ಇವರ ಕವಿತೆ ಮತ್ತು ಚಿಂತನಗಳು ಕಲಬುರಗಿಯ ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಮತ್ತು ೨೦೨೦ರಲ್ಲಿ `ಬದಲಾಗೋಣ. ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. `ಬವಣೆ' `ಗಾಂಧಿಜಿಗೆ ನಮನ' ಎಂಬ ಹನಿಗವನ `ರುಕ್ಮಿಣಿಯ ಆತುರ ' ಎಂಬ ಕಥಾಸಂಕಲನ, `ಸಂಕೀರ್ಣ’ ಎಂಬ ಲೇಖನ, `ಮಾನವಿಯತೆ' ಎಂಬ ಚಿಂತನ ಕೃತಿಗಳು ಬರೆದಿದ್ದು ಅವು ಅಪ್ರಟಿತವಾಗಿವೆ. ಇವರ `ಕರುನಾಡ ಸಿರಿ’ ಎಂಬ ಕವನವು ಕಲಬುರಗಿ ಆಕಾಶವಾಣಿಯ ೫೦ನೇ ವಾರ್ಷಿಕೊತ್ಸವದಂದು ರಾಗ ಸಂಯೋಜಿಸಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿAದ ನವೆಂಬರ ೧ ರಂದು ಏಕಕಾಲಕ್ಕೆ ಪ್ರಸಾರವಾಗಿದೆ ಇವರಿಗೆ `ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ