ಪುಟಗಳು

ಶುಕ್ರವಾರ, ಜನವರಿ 10, 2025

ವಿವೇಕಾನಂದ ಸಜ್ಜನ

ಯುವ ವಿಮರ್ಶಕ ಹಾಗೂ ಲೇಖಕರಾದ ವಿವೇಕಾನಂದ ಸಜ್ಜನ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಜಗನ್ನಾಥ ಸಜ್ಜನ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧೮-೭-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೨೦೧೮ರಲ್ಲಿ `ವಚನ ವೈವಿಧ್ಯ' (ವಿಮರ್ಶಾ) ೨೦೧೯ರಲ್ಲಿ `ಕನ್ನಡ ರಾಮಾಯಣಗಳಲ್ಲಿ ರಾವಣ' ಎಂಬ ತೌಲನಿಕ ಅಧ್ಯಯನ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಇವರ ಚೊಚ್ಚಲ ಕೃತಿ `ವಚನ ವೈವಿಧ್ಯ' ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದುಕೊಂಡಿದೆ. ಇವರ ಬರಹಗಳು `ಶ್ರೀ ಅರವಿಂದರ ಸಂದೇಶ’ `ಇಂಟರ್ ನ್ಯಾಶನಲ್ ಜರ್ನಲ್ ಆಫ್ ಕನ್ನಡ ರಿಸರ್ಚ್’ ಅರುಹು ಕುರುಹು, ಕವಿಮಾರ್ಗ, ರಚನಾ ತ್ರೈಮಾಸಿಕ ಮೊದಲಾದ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೯ರಲ್ಲಿ ಇವರ `ವಚನ ವೈವಿಧ್ಯ' ಕೃತಿಗೆ ಬಹುಮಾನ ಲಭೀಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ