ಶುಕ್ರವಾರ, ಜನವರಿ 10, 2025
ಬಸವೇಶ್ವರಿ ಕೆ.ದೇಗಲೂರೆ
ಉದಯೋನ್ಮಖ ಕವಯತ್ರಿ ಬಸವೇಶ್ವರಿ ಕೆ.ದೇಗಲೂರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಕಲ್ಲಪ್ಪಾ ಮತ್ತು ಮೀನಾಕ್ಷಿ ದಂಪತಿಗಳಿಗೆ ದಿನಾಂಕ ೪-೫-೧೯೯೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎಸ್ಸಿ. ಬಿ.ಇಡಿ. ಪದವಿಧರರಾದ ಇವರು ಹಿಂದಿ ವಿಷಯದಲ್ಲಿಯು ಪದವಿ ಪಡೆದು ಬಸವ ಪ್ರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಬೆಳೆದ ಇವರು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ, ವಚನ, ಜೀವನ ಚರಿತ್ರೆ ಮೊದಲಾದವು ರಚಿಸಿ ಕೆಲ `ಅಪ್ಪಾಜಿ’ (ಕವನಸಂಕಲನ) `ಶ್ರೀ ಸರಡಗಿಯ ಸಂಭ್ರಮ’ (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರು ಬರಹಗಳು ಬೀದರದ ಜನಪ್ರಿಯ ಪ್ರಕಾಶನದ ವತಿಯಿಂದ ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ನೂರು ಆಧುನಿಕ ವಚನಗಳು, ಒಂದು ಸಾವಿರ ಸ್ವರಚಿತ ನುಡಿಗಟ್ಟುಗಳು ರಚಿಸಿ ಇಂಗ್ಲಿಷ್ ಭಾಷೆಯಲ್ಲಿಯು ನೂರಾರು ಕವನಗಳು ರಚಿಸಿರುವ ಇವರು ಬೆಂಗಳೂರಿನ ಬಸವ ಸಮಿತಿಯವರು ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಹಾಗೂ ಬೆಂಗಳೂರಿನ ದಾಸರಹಳ್ಳಿಯ ಸುನಂದಾ ಸಾಹಿತ್ಯ ವೇದಿಕೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೀದರದ ದಾಸ ಸಾಹಿತ್ಯ ಸಮ್ಮೇಳನದ ನಿಮಿತ್ತವಾಗಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ ೨೦೧೧ರಲ್ಲಿ ಸುನಂದ ಸಾಹಿತ್ಯ ವೇದಿಕೆಯು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ ಪ್ರಬಂಧಕ್ಕೆ `ಭಲೆ ಬಸವ ಪ್ರಶಸ್ತಿ’ ಯು ನೀಡಿ ಗೌರವಿಸಿದೆ. ಹಾಗೂ ಚಂದ್ರ ಸ್ನೇಹ ಸೇತು ಸಾಮಾಜಿಕ ಸಾಂಸ್ಕೃತಿಕ ಸೇವಾ ಸಂಸ್ಥೆ ಶಿಲ್ಪನಾದ ಮಧುರ ಸಂಗೀತ ಮಹಾವಿದ್ಯಾಲಯ ರಂಗAಪೇಟ ಸುರಪುರದಿಂದ ಕಲಾಣ ನಾಡಿನ ಕಲಾರಾಧನ ಪ್ರಶಸ್ತಿಯು ನೀಡಿ ಗೌರವಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ